ಬ್ರಹ್ಮಾವರ : 5 ವರ್ಷದ ಹಿಂದೆ ಮಂಗಳೂರಿನಲ್ಲಿ ನಾಲ್ಕು ಜನರ ಸಾಮಾಜಿಕ ಜಾಲತಾಣದ ಗೆಳೆಯರ ತಂಡವೊಂದು ಇಂದು 600 ಜನರ ಸಮಾನ ಮನಸ್ಕರು ಒಂದಾಗಿ ಬಡವರ ಅಶಕ್ತರ ನೆರವಿಗೆ ಸ್ಪಂದಿಸುವ ಕಾರ್ಯ ಮಾಡಿ ಮಾದರಿಯಾಗಿದೆ.
ಹೆಲ್ಪ್ ಲೈನ್ ಸೇವಾ ತಂಡ ,ಬಬ್ಬು ಸ್ವಾಮಿ ಭಕ್ತೆರ್
ಜೈ ತುಳುನಾಡು ಸೇವಾ ಟ್ರಸ್ಟ್,ಅರ್ಪಣಾ ಸೇವಾ ಟ್ರಸ್ಟ್ ಕೆಲವೊಂದು ಸಾಮಾಜಿಕ ಚಟುವಟಿಕೆ ಮಾಡಿದ್ದರು.
ರವಿ ಕಟಪಾಡಿಯವರು ಅಷ್ಠಮಿಯಂದು ವಿಶೇಷ ವೇಷದಿಂದ ಲಕ್ಷಾಂತರ ರೂಪಾಯಿ ಸಂಗ್ರಹ ಮಾಡಿ ಅಶಕ್ತರೀಗೆ ನೆರವಾದ ಕಾರ್ಯದಿಂದ ಸ್ಫೂರ್ಥಿ ಪಡೆದ ಇವರ ತಂಡ ಜಿಲ್ಲೆಯಲ್ಲಿ ನಡೆಯುವ ಜಾತ್ರೆಯಲ್ಲಿ ನಾನಾ ವಿಶೇಷ ವೇಷದೊಂದಿಗೆ ಜನರನ್ನು ಸೆಳೆದು ಡಬ್ಬಿಯೊಂದರಲ್ಲಿ ಹಣ ಸಂಗ್ರಹಿಸುವ ಯೋಜನೆ ರೂಪಿಸಿದರು.
ಭಾನುವಾರ ಬಾರಕೂರು ಕಚ್ಚೂರಿನ ಮಾಲ್ತೀ ದೇವಿ ಹಾಗೂ ಬಬ್ಬುಸ್ವಾಮಿ ದೇವಸ್ಥಾನದ ಜಾತ್ರೆಯಲ್ಲಿ ಇವರ ವಿಶೇಷ ವೇಷದತಂಡ ಜಾತ್ರೆಗೆ ಬರುವ ಜನರಿಂದ ಹಣ ಸಂಗ್ರಹಿಸಿದೆ .
ಪಾರದರ್ಶಕ ವ್ಯವಸ್ಥೆಯಲ್ಲಿರುವ ಇವರ ತಂಡ ಚಿಕ್ಕ ಮಕ್ಕಳ , ಅಶಕ್ತರ ,ವೃದ್ಧರ, ವಸತಿ ರಹಿತರೀಗೆ ಒಟ್ಟು 50 ಲಕ್ಷ ರೂ ಜನರಿಂದ ಪಡೆದು ಜನರಿಗಾಗಿ ನೀಡಿದೆ .
ನಾನಾ ಖಾಸಗಿ ಉದ್ಯೋಗದಲ್ಲಿರುವ ತಂಡದಲ್ಲಿ ಕಲಾ ಶಿಕ್ಷಕ ನಿಶಾನ್ ಅಂಚನ್ ವೇಷದ ತಯಾರಿ ಮಾಡಿದರೆ, ವಿಶೇಷ ವೇಷ ಧಾರಿಯಾಗಿಮಹೇಶ್ ಅಮೀನ್,ನಾಗರಾಜ್,ಯೋಗೀಶ್,ಪೂರ್ಣ ಪ್ರಕಾಶ್ ,ನಿರಂಜನ್,ಸವಿತಾ ಕಾಂಚನ್, ರವಿ ಬಜ್ಪೆ, ಶ್ರೀಧರ್ ,ನಾಗರಾಜ್,ಹಿರಿಯ ಸಲಹೆಗಾರರಾಗಿ ಜಯಂತ್ ಕೊಲಂಬೆ, ನಿರ್ದೇಶಕರಾಗಿ ಧನು ಅಂಚನ್ ಇದ್ದಾರೆ
ಹಿರಿಯ ಸದಸ್ಯ ತಿಮ್ಮಪ್ಪ ಪೂಜಾರಿಯವರ ಬ್ಯಾಂಕ್ ಖಾತೆಯ ಪೋನ್ ಪೇ ಸಂಖ್ಯೆ 9035892580 ಇದಕ್ಕೆ ದಾನಿಗಳು ಹಣ ನೀಡಿದಲ್ಲಿ ಸಮಾಜಕ್ಕೆ ಸದ್ವಿನಿಯೋಗವಾಗಲಿದೆ .

ಕರಾವಳಿ
ಜಾತ್ರೆಯಲ್ಲಿ ಹಣ ಸಂಗ್ರಹಿಸಿ ಅಶಕ್ತರಿಗೆ ನೆರವಾಗುವ ಹೆಲ್ಪ್ ಲೈನ್ ಸೇವಾ ತಂಡ| ಸೋಶಿಯಲ್ ಮೀಡಿಯಾ ತಂಡದಿಂದ ಮಹತ್ಕಾರ್ಯ| Video
You May Also Like
ಕರಾವಳಿ
1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...
Uncategorized
1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...
Uncategorized
1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...
Uncategorized
1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...