Connect with us

Hi, what are you looking for?

ಕರಾವಳಿ

ಮನೆಯೊಳಗೆ ಬೆಳೆದ ಹುತ್ತವೀಗ ಶ್ರೀ ನಾಗಯಕ್ಷಿ ದುರ್ಗಾಪರಮೇಶ್ವರೀ ದೇವಿ ಕ್ಷೇತ್ರ|Video

2

ಬಾರಕೂರು : ಸಮುದ್ರ ರಾಜನಿಂದ ಪಶ್ಚಿಮ ಘಟ್ಟತಟದಿಂದ ಹೊಸ ಭೂಮಿಯನ್ನು ಪಡೆದ ಪರಶುರಾಮ ಭೂ ಸೃಷ್ಠಿಯ ಕರಾವಳಿ ಜಿಲ್ಲೆಗೆ ಪಾತಾಳದ ನಾಗಾ ಲೋಕಕ್ಕೆ ರಂಧ್ರ ಕೊರೆದು ಹೊಸ ಮಣ್ಣನ್ನು ತಂದ ನಾಗಗಳು ಅಲ್ಲಲ್ಲಿ ಹುತ್ತವಾಗಿ ಬಳಿಕ ದೇವರ ಸಾನಿದ್ಯವಾದ ಉದಾಹರಣೆ ಹಲವಾರು ಕಡೆ ಕಂಡು ಬಂದಿದೆ .

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ , ನೀಲಾವರ ಶ್ರೀ ಮಹಿಷ ಮರ್ಧಿನಿ ,ಕೆಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸೇರಿದಂತೆ ಹಲವಾರು ಉದಾಹರಣೆ ಇದೆ .

ಇದೂ ಅಂತಹುದೇ ಕಥೆ.
೩೬೫ ದೇವಾಲಯಗಳ ನಗರ ಬಾರಕೂರು ಬಳಿಯ ಹೊಸಾಳದ ಮನೆಯೊಳಗಿದ್ದ ವಲ್ಮೀಕ ದಿನದಿಂದ ದಿನಕ್ಕೆ ಬೆಳೆದು ಮನೆ ಎತ್ತರಕ್ಕೆ ಬಂದಾಗ ಆಕುರಿತು ಮನೆಯವರು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಇದೊಂದು ದೇವರ ಸಾನಿಧ್ಯ. ಇಲ್ಲಿ ಮಾನವರ ವಾಸ ಅಸಾದ್ಯ . ಇಲ್ಲಿ ಅಂತರ್ಗತವಾಗಿದ್ದ ಶಕ್ತಿಗೆ ಗುಡಿ ನಿರ್ಮಾಣವಾಗ ಬೇಕು ಪೂಜೆ ಪುನಸ್ಕಾರವಾಗ ಬೇಕು.ಭಕ್ತರ ಕಷ್ಟ ಕೋಟಲೆಗಳಿಗೆ ಪರಿಹಾರ ನೀಡುವ ಶಕ್ತಿ ಕೇಂದ್ರವಾಗ ಬೇಕು ಎಂದು ಕಂಡು ಬಂತು.

Advertisement. Scroll to continue reading.

ಆ ಹಿನ್ನೆಲೆಯಲ್ಲಿ ಇಲ್ಲಿನ ಲಕ್ಷ್ಮೀ ಜಯಕರ ದೇವಾಡಿಗ , ಯಮುನಾ ಗೋವಿಂದ ದೇವಾಡಿಗ ಮತ್ತು ಮಮತಾ ಉಮೇಶ್ ದೇವಾಡಿರ ನೇತೃತ್ವದಲ್ಲಿ ಸ್ಥಳಿಯ ಊರ ಪರವೂರ ಭಕ್ತರ ಮತ್ತು ದಾನಿಗಳ ನೆರವಿನಿಂದ ದೇವಸ್ಥಾನ ನಿರ್ಮಾಣದ ಪ್ರಯತ್ನ ಸಾಗಿತು.

ವಲ್ಮೀಕ ಸಾನಿಧ್ಯವನ್ನು ಹಾಗೇ ಉಳಿಸಿಕೊಂಡು ಅದೇ ಜಾಗದಲ್ಲಿ ಶಾಸ್ತ್ರ ಸಮ್ಮತ ಆಯ ಪ್ರಮಾಣದಲ್ಲಿ ದೇವಸ್ಥಾನ ನಿರ್ಮಿಸಿ , ಒಂದು ಭಾಗದಲ್ಲಿ ದೇವಿಯ ವಿಗ್ರಹಪ್ರತಿಷ್ಠೆಗೆ ಶಿಲ್ಪಿ ಸುಜಯ ಆಚಾರ್ಯದಿಂದ ಶ್ರೀ ನಾಗಯಕ್ಷಿ ದುರ್ಗಾಪರಮೇಶ್ವರೀ ದೇವಿಯ ಮೂರ್ತಿಯನ್ನು ಮಾಡಲಾಗಿತ್ತು.

ಪ್ರತಿಷ್ಠಾ ಕಾರ್ಯದ ಅಂಗವಾಗಿ ೨೦೨೩ ಜನವರಿ ೧೫ ರಂದು ನಾನಾ ಭಾಗದಿಂದ ಬಂದ ಹಸಿರು ಹೊರೆ ಕಾಣಿಕೆಯನ್ನು ಹೇರಾಡಿಯಿಂದ ದೇವಸ್ಥಾನದ ತನಕ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

೧೬ ರಂದು ವೇದ ಮೂರ್ತಿ ರಾಜೇಶ್ ಐತಾಳ್ ಶಿರಿಯಾರ ಇವರಿಂದ ಧಾರ್ಮಿಕ ಕಾರ್ಯಕ್ರಮದೊಂದಿಗೆ ಪ್ರತಿಷ್ಠಾಪನಾ ಕಾರ್ಯ ಜರುಗಿತು.

Advertisement. Scroll to continue reading.

ಬಳಿಕ ಸಾನಿಧ್ಯದ ಶಕ್ತಿ ಸಂಚಯನದ ಹಿನ್ನೆಲೆಯಲ್ಲಿ ಇಲ್ಲಿನ ಸಾತ್ವಿಕ ಮಹಿಳೆ ಮಮತಾರ ಮೂಲಕ ಶ್ರೀ ನಾಗಯಕ್ಷಿ ದುರ್ಗಾಪರಮೇಶ್ವರೀ ದೇವಿಯು ಆವೇಶದ ಮೂಲಕ ಗೋಚರವಾಗಿ ಭಕ್ತರೀಗೆ ಅಭಯ ಮತ್ತು ರಕ್ಷೆ ನೀಡುವ ಶಕ್ತಿಕೇಂದ್ರ ಎನ್ನುವುದು ಕಂಡು ಬಂತು.

ರಾತ್ರಿ ಪ್ರತಿಷ್ಠಾಪನೆಯ ಅಂಗವಾಗಿ ನಾನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಿತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

2 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

2 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!