ಲಖನೌ : ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ವಾರಣಾಸಿ ಕೋರ್ಟ್ ಅವಕಾಶ ನೀಡಿದೆ.
ಇದೇ ನ್ಯಾಯಾಲಯ ಮುಂದಿ ಏಳು ದಿನಗಳೊಳಗೆ ಪೂಜೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದೆ. ಹಿಂದೂಗಳು ಪೂಜೆ ಮಾಡಲು ಸೂಕ್ತ ವ್ಯವಸ್ಥೆ ಮಾಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ನ್ಯಾಯಾಲಯ ಆದೇಶಿಸಿದೆ.
ಈ ನಡುವೆ ವಾರಣಾಸಿಯ ಜ್ಞಾನವಾಪಿ ಮಸೀದಿಯ ‘ವುಜುಖಾನಾ’ ಸಮೀಕ್ಷೆಗೆ ಸಂಬಂಧಿಸಿದ ಅರ್ಜಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ ಅಂಜುಮನ್ ಇಂಟೆಜಾಮಿಯಾ ಮಸಾಜಿದ್ ಸಮಿತಿ ಮತ್ತು ಇತರ ವಿರೋಧ ಪಕ್ಷಗಳಿಗೆ ನೋಟಿಸ್ ನೀಡಿದೆ.
1993ಕ್ಕೂ ಮೊದಲು ಈ ನೆಲಮಾಳಿಗೆಯಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಅಯೋಧ್ಯೆಯ ವಿವಾದಿತ ಕಟ್ಟಡದ ಕುಸಿತದ ನಂತರ, ಜಿಲ್ಲಾಡಳಿತ ಜ್ಞಾನವಾಪಿ ಸುತ್ತಲೂ ಕಬ್ಬಿಣದ ಸರಳುಗಳನ್ನು ಅಳವಡಿಸಿದ್ದರು.
ಸೋಮನಾಥ ವ್ಯಾಸ್ ಅವರ ಕುಟುಂಬವು 1993 ರವರೆಗೆ ನೆಲಮಾಳಿಗೆಯಲ್ಲಿ ನಿಯಮಿತ ಪೂಜೆಯನ್ನು ಮಾಡುತ್ತಿತ್ತು. ವ್ಯಾಸ್ ಜಿ ಮೊಮ್ಮಗ ಶೈಲೇಂದ್ರ ವ್ಯಾಸ್ ಮರು ಪೂಜೆಗೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. 1993ರಿಂದ ನೆಲಮಾಳಿಗೆಯಲ್ಲಿ ಪೂಜೆ ಸ್ಥಗಿತಗೊಂಡಿದೆ ಎಂದು ಅರ್ಜಿ ಸಲ್ಲಿಸಿದರು. ಪ್ರಸ್ತುತ ಈ ನೆಲಮಾಳಿಗೆಯು ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯಲ್ಲಿದೆ. ನೆಲಮಾಳಿಗೆಯನ್ನು ಡಿಎಂಗೆ ಒಪ್ಪಿಸಿ ಅಲ್ಲಿ ಪೂಜೆ ಪುನರಾರಂಭಕ್ಕೆ ಅನುಮತಿ ನೀಡಬೇಕು. ಜನವರಿ 17 ರಂದು, ನೆಲಮಾಳಿಗೆಯನ್ನು ಸ್ವಾಧೀನಪಡಿಸಿಕೊಳ್ಳಲು ಡಿಎಂಗೆ ನ್ಯಾಯಾಲಯ ಆದೇಶಿಸಿತು. ಇದರ ನಂತರ, ಜನವರಿ 24 ರಂದು ನೆಲಮಾಳಿಗೆಯನ್ನು ಡಿಎಂ ವಹಿಸಿಕೊಂಡರು.