Connect with us

Hi, what are you looking for?

Diksoochi News

Uncategorized

ಸಾಲಿಗ್ರಾಮ – ಭಿಕ್ಷಾಟನೆ ಮಾಡಿ 1ಲಕ್ಷ ರೂ ಸಾಲಿಗ್ರಾಮ ದೇವಳಕ್ಕೆ ನೀಡಿದ ಅಜ್ಜಿ ಶಬರಿಮಲೆ ಯಾತ್ರೆಗೆ

1


ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಅನ್ನದಾನ ಪೂರೈಸಿ ಶಬರಿಮಲೆ ಯಾತ್ರೆ ಹೊರಟಿದ್ದಾರೆ.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಹಾಗೂ ಮಯ್ಯ ಟೀಫಿನ್ ಮಾಲಿಕ ರಾಫವೇಂದ್ರ ಮಯ್ಯ ಸಮ್ಮುಖದಲ್ಲಿ ಅಶ್ವಥಮ್ಮ ಇರುಮುಡಿ ಕಟ್ಟುವ ಕಾರ್ಯ ನಡೆಸಿದರು.
ಕಳೆದ 26 ವರ್ಷಗಳಿಂದ ವಿವಿಧ ಕ್ಷೇತ್ರಗಳಿಗೆ ದಾನಗೈದು ಶಬರಿಮಲೆ ಯಾತ್ರೆ ಕೈಗೊಂಡಿದ್ದು ಅದರಂತೆ ತಾನು ಭಿಕ್ಷಾಟನೆ ಮಾಡಿ ಸಂಗ್ರಹಿಸಿದ ಹಣವನ್ನು ಉಡುಪಿ, ದಕ್ಷಿಣಕನ್ನಡ ಸೇರಿದಂತೆ ಹೊರರಾಜ್ಯ ಕೇರಳದ ಅಯ್ಯಪ್ಪನ ಸನ್ನಿಧಾನಕ್ಕೂ ಲಕ್ಷರೂ ನೀಡಿ ಮನೆಮಾತಾಗಿರುವ ಅಶ್ವಥಮ್ಮ ಇದೀಗ ಈ ಬಾರಿ ಸಾಲಿಗ್ರಾಮ ಕ್ಷೇತ್ರದಿಂದ ಯಾತ್ರೆಗೆ ಹೊರಟಿರುವುದು ವಿಶೇಷತೆಯಾಗಿದೆ.

ಅಜ್ಜಿಯ ಪಾದಕ್ಕೆರಗಿ ಆಶೀರ್ವಾದ ಪಡೆದರು :

ಅಶ್ವಥಮ್ಮ ಶಬರಿಮಲೆ ಹೊರಡುವ ವಿಚಾರ ಗಮನಿಸಿದ ಸ್ಥಳೀಯ ಅಯ್ಯಪ್ಪ ಭಕ್ತಾಧಿಗಳು,ಇನ್ನಿತರರು ಅಜ್ಜಿಯ ಪಾದಕ್ಕೆರಗಿ ಆಶೀರ್ವಾದ ಪಡೆದು ಅಜ್ಜಿಯ ಹರಕೆಯಂತೆ ಶ್ರೀ ಕ್ಷೇತ್ರ ಅನ್ನದಾನದಲ್ಲಿ ಪಾಲ್ಗೊಂಡು ಸಂತುಷ್ಟರಾದರು.

ಕಳೆದ ಹಲವು ವರ್ಷಗಳಿಂದ ಶ್ರೀ ದೇವಳದ ಎದುರುಗಡೆ ಭಿಕ್ಷಾಟನೆ ಮಾಡುವ ಅಶ್ವಥಮ್ಮನಿಗೆ ಭದ್ರತೆಯ ದೃಷ್ಠಿಯಿಂದ ಶ್ರೀಕ್ಷೇತ್ರದ ಸ್ಥಳದಲ್ಲಿ ಇರಲು ವ್ಯವಸ್ಥೆ ಕಲ್ಪಿಸಲಾಗಿದೆ.

Advertisement. Scroll to continue reading.

ವರದಿ : ದಿನೇಶ್ ರಾಯಪ್ಪನಮಠ

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಮಂಗಳೂರು : ನಾಲ್ಕೂವರೆ ತಿಂಗಳ ಹಸುಗೂಸನ್ನು ಸಾಯಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಗುಜ್ಜರಕೆರೆಯಲ್ಲಿ ನಡೆದಿದೆ. ನಾಲ್ಕೂವರೆ ತಿಂಗಳ ಮಗು ಅಬ್ದುಲ್ಲಾ ಹೂದ್ ಮತ್ತು ತಾಯಿ ಫಾತಿಮಾ ರುಕಿಯಾ(23) ಮೃತಪಟ್ಟವರು....

ರಾಷ್ಟ್ರೀಯ

1 ಲಕ್ನೋ: ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಅವರ ಮಗ ತಾವು ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿದ ಪರಿಣಾಮ ಸಾವಿಗೀಡಾದ ಘಟನೆ ನಡೆದಿದೆ. ಉತ್ತರಪ್ರದೇಶದ ಖಾನ್‌ಪುರ್‌ ದೆಹತ್ ಜಿಲ್ಲೆಯ ಅಕ್ಬರ್‌ಪುರ ನಗರದಲ್ಲಿ ಈ...

ಜ್ಯೋತಿಷ್ಯ

1 ದಿನಾಂಕ : ೦೪-೧೨-೨೩, ವಾರ: ಭಾನುವಾರ, ನಕ್ಷತ್ರ : ಆಶ್ಲೇಷಾ, ತಿಥಿ : ಷಷ್ಠಿ ವಿವಾಹೇತರ ಸಂಬಂಧಗಳಿಂದ ಅಂತರ ಕಾಯ್ದುಕೊಳ್ಳಬೇಕು. ನೀವು ಸಂಬಂಧಿಕರನ್ನು ಹೆಚ್ಚು ನಂಬಬಾರದು. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ...

ರಾಷ್ಟ್ರೀಯ

0 ಛತ್ತೀಸ್‌ಗಢ : ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಇದು ಅಚ್ಚರಿಯ ಗೆಲುವಾಗಿದ್ದರೆ, ಮತ್ತೊಂದೆಡೆ ಸೇಡಿನ ಗೆಲುವೊಂದು ಈ ಕ್ಷೇತ್ರದಲ್ಲಿ ಹುಬ್ಬೇರಿಸುವಂತೆ ಮಾಡಿದೆ. ತನ್ನ ಮಗನ ಸಾವಿನ ವಿರುದ್ಧ ಸೇಡು...

ರಾಷ್ಟ್ರೀಯ

2 ಚೆನ್ನೈ : ಚೆನ್ನೈನಿಂದ ಕೊಯಮತ್ತೂರು ಕಡೆಗೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿ 20 ಮಂದಿ ಗಾಯಗೊಂಡಿದ್ದು, ಒಬ್ಬ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಕನ್ಯಾಕುಮಾರಿ ನಿವಾಸಿ ಮಣಿಕಂದನ್ ಎಂದು ಗುರುತಿಸಲಾಗಿದೆ. 45...

error: Content is protected !!