ಫೇಸ್ ಬುಕ್ ಲೈವ್ ಸ್ಟ್ರೀಮ್ ಮಾಡುತ್ತಿದ್ದ ಉದ್ಭವ್ ಠಾಕ್ರೆ ಬಣದ ನಾಯಕರೊಬ್ಬರ ಮೇಲೆ ಮುಂಬೈನ ದಹಿಸರ್ ಪ್ರದೇಶದಲ್ಲಿ ಗುರುವಾರ ಗುಂಡು ಹಾರಿಸಲಾಗಿದೆ.
ಉದ್ಭವ್ ಠಾಕ್ರೆ ಬಣದ ಮುಖಂಡ ವಿನೋದ್ ಘೋಸಾಲ್ಕರ್ ಅವರ ಪುತ್ರ ಅಭಿಷೇಕ್ ಘೋಸಾಲ್ಕರ್, ಮೌರಿಸ್ ಭಾಯ್ ಎಂಬಾತನೊಂದಿಗೆ ಫೇಸ್ಬುಕ್ ಲೈವ್ ಸ್ಟ್ರೀಮ್ ಮಾಡುತ್ತಿದ್ದರು.
ಮೌರಿಸ್ ನಂತರ ಲೈವ್ ಸ್ಟ್ರೀಮ್ ತೊರೆದಿದ್ದು, ನಂತರ ಘೋಸಾಲ್ಕರ್ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದಾನೆ. ಬಳಿಕ ಮೌರಿಸ್ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
Advertisement. Scroll to continue reading.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಭಿಷೇಕ್ ಘೋಸಲ್ಕರ್ಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.