Connect with us

Hi, what are you looking for?

Diksoochi News

ಕರಾವಳಿ

ಸವಣಾಲು ಕಾಳಿಬೆಟ್ಟ ಶ್ರೀದುರ್ಗಾಕಾಳಿಕಾಂಬ ಕ್ಷೇತ್ರ : ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

0

ಬೆಳ್ತಂಗಡಿ : ಪ್ರತಿ ವರ್ಷದಂತೆ ಈ ವರ್ಷವೂ ಸವಣಾಲು ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ವಿಜ್ರಂಭಣೆಯಿಂದ ನಡೆಯಿತು.
ಗಣಪತಿ ಪೂಜೆಯಿಂದ ಮೊದಲ್ಗೊಂಡು, ಯಾಗ ಶಾಲೆ ಪ್ರವೇಶ, ನಾಗ ಸನ್ನಿಧಾನದಲ್ಲಿ ಹೋಮ, ಕಾಳಿಗುಡಿಯಲ್ಲಿ ರಾತ್ರಿ ಹೂವಿನ ಪೂಜೆ, ರಂಗ ಪೂಜೆ ಹಾಗೂ ಅಷ್ಟಾವದಾನ ಸೇವೆ ನೆರವೇರಿತು.


ಕಾಳಿಗುಡಿಯಲ್ಲಿ ಚಂಡಿಕಾಹೋಮ, ವಿಶೇಷ ಪೂಜೆ, ರಾತ್ರಿ ದೇವರ ಬಲಿ, ವಸಂತ ಮಂಟಪದಲ್ಲಿ ಶ್ರೀ ದೇವಿಗೆ ಅಷ್ಟಾವದಾನ ಸೇವೆ, ಮೂಲದುರ್ಗಾ ಗುಡಿಯಲ್ಲಿ ರಂಗ ಪೂಜೆ, ವಿಶೇಷ ಪೂಜೆ,
ಓಕುಳಿ, ಚಂಡಿಕಾಹೋಮ ನೆರವೇರಿತು. ಪ್ರತಿದಿನ ಅನ್ನ ಸಂತರ್ಪಣೆಯೂ ನಡೆಯಿತು.



ಇದರ ಜೊತೆಗೆ ಊರ ಅಂಗನವಾಡಿ ಕೇಂದ್ರದ ಪುಟಾಣಿಗಳು ಹಾಗೂ ಊರವರಿಂದ ಸಾಂಸ್ಕೃತಿಕ ವೈಭವ, ಅರೆಹೊಳೆ ಪ್ರತಿಷ್ಠಾನ, ಮಂಗಳೂರು ಇದರ ನಂದಗೋಕುಲ ತಂಡದಿಂದ ಬಿಡುವನೇ ಬ್ರಹ್ಮಲಿಂಗ ಹಾಗೂ ನೃತ್ಯ ವೈಭವ, ಸಂಗಮ ಕಲಾವಿದರು, ಉಜಿರೆ ಇವರಿಂದ “ನನ ಮರ್ಲ್ ಕಟ್ಟೊಡ್ಚಿ” ಎಂಬ ತುಳು ಹಾಸ್ಯಮಯ ನಾಟಕ ನಡೆಯಿತು.
ಊರ ಹಾಗೂ ಪರವೂರ ಭಕ್ತರೆಲ್ಲರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!