Connect with us

Hi, what are you looking for?

Diksoochi News

ಕರಾವಳಿ

ಮಕ್ಕಳಿಗಾಗಿ ರಾಮಾಯಣ ಮಹಾಭಾರತದ ಅನಿಮೇಟೆಡ್ ಸೀರೀಸ್ – ವ್ಯಾಸ ಆ್ಯಪ್ ಬಿಡುಗಡೆ

0

ಮೂಡಬಿದಿರೆ : ಮಕ್ಕಳಿಗಾಗಿ ಮಹಾಭಾರತ ರಾಮಾಯಣದ ಕಥೆಗಳನ್ನು ಅನಿಮೇಷನ್ ಮೂಲಕ ನೀಡುವ ಉದ್ದೇಶದಿಂದ “ವ್ಯಾಸ” ಎಂಬ ಕನ್ನಡದ ಆ್ಯಪ್ ಮಾರ್ಚ್ 8 ರಂದು ಲೋಕಾರ್ಪಣೆಗೊಳ್ಳಲಿದೆ.


ಪ್ರಥಮ ಸೀರೀಸ್ ನಲ್ಲಿ “ಸರ್ಪಮೇಧ” ಕಥೆ ಇದ್ದು, ಸುಮಾರು 8 ರಿಂದ 10 ಎಪಿಸೋಡ್ಸ್ ಪ್ರತಿ ಭಾನುವಾರ ಬೆಳಿಗ್ಗೆ 10 ಘಂಟೆಗೆ ಪ್ರಸಾರಗೊಳ್ಳಲಿದೆ. ಇದರ ಪ್ರೋಮೋ ಹಾಗೂ ಆ್ಯಪ್ ಚಾಲನೆ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ಮಾರ್ಚ್ 8ರಂದು ಸಂಜೆ 4 ಗಂಟೆಗೆ ನಡೆಯಲಿದೆ.

Advertisement. Scroll to continue reading.


ಕನ್ನಡದ ಈ ವಿನೂತನ ಪ್ರಯೋಗಕ್ಕೆ ನಾಡಿನ ಗಣ್ಯರು ಅಂದು ಚಾಲನೆ ನೀಡಲಿದ್ದಾರೆ. ಇದು ಸಂಪೂರ್ಣ ಉಚಿತ ಓ ಟಿ ಟಿ ಯಾಗಿದ್ದು, ಜಗತ್ತಿನಲ್ಲೇಡೆ ವೀಕ್ಷಿಸಬಹುದಾಗಿದೆ ಎಂದು ವ್ಯಾಸ ನಿರ್ಮಾಪಕಿ ಬಿ. ಮೇಘನಾ ಶೆಣೈ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!