ಮುಂಬೈ: ಬೀದಿ ಬದಿಯಲ್ಲಿ ಚಿಕನ್ ಬೀದಿ ಬದಿಯಲ್ಲಿ ಚಿಕನ್ ಶವರ್ಮಾ ತಿಂದ ಯುವಕನೊಬ್ಬ ಮೃತಪಟ್ಟಿದ್ದು, ಐವರು ಅಸ್ವಸ್ಥಗೊಂಡ ಘಟನೆ ಮಹಾರಾಷ್ಟ್ರದ ಮನ್ಖುರ್ದ್ನ ನಗರದಲ್ಲಿ ನಡೆದಿದೆ
![](http://diksoochinews.com/wp-content/uploads/2023/10/diksoochi_inline.jpeg)
ಪ್ರಥಮೇಶ್ ಭೋಕ್ಷೆ (19) ಮೃತ ಯುವಕ. ಪ್ರಥಮೇಶ್ ಭೋಕ್ಷೆ ತನ್ನ ಸ್ನೇಹಿತರೊಂದಿಗೆ ಬೀದಿ ಬದಿಯಲ್ಲಿ ಚಿಕನ್ ಶವರ್ಮಾ ತಿಂದು ಮನೆಗೆ ಮರಳಿದ್ದು, ಮರುದಿನ ಆತನಿಗೆ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ.
ವಾಂತಿ ಸಂಜೆಯವರೆಗೆ ನಿಲ್ಲದ ಕಾರಣ, ಆತನ ಪೋಷಕರು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಿದ್ದಾರೆ. ಈ ವೇಳೆ ಭೋಕ್ಷೆಗೆ ಕೆಲವು ಔಷಧಿಗಳನ್ನು ನೀಡಿ ಮನೆಗೆ ವಾಪಸ್ ಕಳುಹಿಸಲಾಗಿದೆ. ಆದರೆ, ಭೋಕ್ಷೆ ಮನೆಗೆ ತಲುಪುತ್ತಿದ್ದಂತೆ, ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ KEM ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಅದೇ ರೀತಿ ಅದೇ ಅಂಗಡಿಯಲ್ಲಿ ಚಿಕನ್ ಶವರ್ಮಾ ತಿಂದ ಐವರು ಅಸ್ವಸ್ಥರಾಗಿದ್ದರು. ಆದರೆ ಈದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಹಾಳಾದ ಕೋಳಿ ಬಳಸಿದ್ದಕ್ಕಾಗಿ ಚಿಕನ್ ಶವರ್ಮಾ ಅಂಗಡಿ ನಡೆಸುತ್ತಿದ್ದ ಇಬ್ಬರು ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಅಂಗಡಿ ಮಾಲೀಕರಾದ ಆನಂದ್ ಕಾಂಬ್ಳೆ ಮತ್ತು ಮೊಹಮ್ಮದ್ ಅಹ್ಮದ್ ರೆಜಾ ಶೇಖ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
![](http://diksoochinews.com/wp-content/uploads/2023/10/diksoochi_inline.jpeg)
![](http://diksoochinews.com/wp-content/uploads/2023/11/Untitled-1.png)