Connect with us

Hi, what are you looking for?

Diksoochi News

ಸಿನಿಮಾ

ಧಾರಾವಾಹಿ ದೃಶ್ಯವೊಂದರಲ್ಲಿ ಎಡವಟ್ಟು; ‘ಸೀತಾ ರಾಮ’ ನಟಿ ಮೇಲೆ ಬಿತ್ತು ಕೇಸ್!

2

ಸದ್ಯ ಕಿರುತೆರೆಯಲ್ಲಿ ‘ಸೀತಾರಾಮ’ ಜನಪ್ರಿಯ ಧಾರಾವಾಹಿ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಗೆ ತನ್ನದೇ ಆದ ಅಭಿಮಾನಿ ಬಳಗವಿದೆ. ಅದರಲ್ಲೂ ಅಗ್ನಿಸಾಕ್ಷಿಯ ಸನ್ನಿಧಿ ಖ್ಯಾತಿಯ ವೈಷ್ಣವಿಗೌಡ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ವೈಷ್ಣವಿಗೆ ಅವರದೇ ಆದ ಫ್ಯಾನ್ಸ್ ಫಾಲೋವರ್ಸ್ ಇದ್ದು, ಸೀತಾರಾಮ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಆದರೆ, ಈಗ ವೈಷ್ಣವಿ ಗೌಡ ಮೇಲೆ ಪ್ರಕರಣ ದಾಖಲಾಗಿದೆ.

ಸೀರಿಯಲ್  ಶೂಟಿಂಗ್ ನಲ್ಲಿ ಎಡವಟ್ಟು:

Advertisement. Scroll to continue reading.

ಧಾರಾವಾಹಿಯ ದೃಶ್ಯವೊಂದರಲ್ಲಿ ವೈಷ್ಣವಿ ಗೌಡ ಹಾಗೂ ಅವರ ಸ್ನೇಹಿತೆ ಸ್ಕೂಟರಿನಲ್ಲಿ ಪ್ರಯಾಣ ಮಾಡುತ್ತಾ ಇರುತ್ತಾರೆ. ಆದರೆ ಈ ಸಂದರ್ಭದಲ್ಲಿ ಸ್ಕೂಟಿಯಲ್ಲಿ ಹಿಂದೆ ಕುಳಿತು ಪ್ರಯಾಣ ಮಾಡುತ್ತಿರುವ ವೈಷ್ಣವಿ ಗೌಡ ಅವರು ಸೀರಿಯಲ್ ಶೂಟಿಂಗ್ ವೇಳೆ ಹೆಲ್ಮೆಟ್ ಧರಿಸಿರುವುದಿಲ್ಲ.

ಧಾರಾವಾಹಿಯನ್ನು ಹಲವಾರು ಜನರು ನೋಡುತ್ತಾರೆ. ನಟ – ನಟಿಯರನ್ನು ಅನುಕರಿಸುತ್ತಾರೆ ಎನ್ನುವ ಕಾರಣಕ್ಕೆ ಇದೀಗ ಅವರಿಗೆ ದಂಡ ವಿಧಿಸಲಾಗಿದೆ. 

ಈ ಸೀರಿಯಲ್‌ ದೃಶ್ಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ  ಗಮನಿಸಿದ ಮಂಗಳೂರಿನ ಜಯಪ್ರಕಾಶ್‌ ಎಕ್ಕೂರು ಎಂಬುವವರು ಮಂಗಳೂರು ನಗರ ಪೊಲೀಸರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಸಮಾಜಕ್ಕೆ ಇದರಿಂದ ತುಂಬಾ ತಪ್ಪು ಸಂದೇಶ ರವಾನೆ ಆಗುತ್ತಾ ಇದೆ ಎಂದು ಹೇಳಿದ್ದಾರೆ. ಆ ಕಾರಣದಿಂದ ಅವರು ಕಂಪ್ಲೇಂಟ್ ಮಾಡಿದ್ಧಾರೆ. ಈ ಕೂಡಲೇ ಆ ನಟಿಯ ಮೇಲೆ, ಸೀರಿಯಲ್‌ ನಿರ್ದೇಶಕ ಮತ್ತು ವಾಹಿನಿ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಜಯಪ್ರಕಾಶ್ ಬರೆದಿದ್ದಾರೆ.

ದೂರಿನ ಆಧಾರದ ಮೇಲೆ ಮಂಗಳೂರು ಪೂರ್ವ ಸಂಚಾರ ಠಾಣೆಗೆ ಈ ಕೇಸ್‌ ವರ್ಗಾವಣೆಯಾಗಿತ್ತು.  ವಾಹಿನಿ ಮತ್ತು ನಟಿಗೆ ನೋಟಿಸ್‌ ರವಾನಿಸಲಾಗಿತ್ತು. ಜತೆತಗೆ ಈ ಸೀರಿಯಲ್‌ ಶೂಟಿಂಗ್‌ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದ್ದರಿಂದ ಆ ಭಾಗದ ರಾಜಾಜಿನಗರ ಪೊಲೀಸ್‌ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ಆ ನಂತರದಲ್ಲಿ ತಲಾ 500 ರೂಪಾಯಿ ದಂಡ ವಿಧಿಸಲಾಗಿದೆ. ಗಾಡಿಯ ಓನರ್ ಸವಿತಾ ಎನ್ನುವವರಿಗೂ 500 ರೂ ದಂಡ ವಿಧಿಸಲಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!