ಕುಂದಾಪುರ : ಸಾಲಿಗ್ರಾಮದಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್ ಸಬ್ ಜ್ಯೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಕೋಟೇಶ್ವರದ ಶೇಖರ ಪೂಜಾರಿ ಹಾಗೂ ಜಲಜ ಪೂಜಾರಿ ಯವರ ಮಗಳಾದ ಕು! ಸೌಜನ್ಯ ಪೂಜಾರಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಮಾ. 15 ರಂದು ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಇವಳ ಸಾಧನೆಯನ್ನು ಗಮನಿಸಿ ಬಿಲ್ಲವ ಸಂಘ ಕುಂದಾಪುರ ಹಾಗೂ ಶ್ರೀ ನಾರಾಯಣಗುರು ಯುವಕ ಮಂಡಲ ಅಭಿನಂದಿಸಿ ಪ್ರೋತ್ಸಾಹ ಧನವನ್ನು ನೀಡಿದೆ.
ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ, ಟಿ.ಕೆ ಕೋಟ್ಯಾನ್, ರಾಜೇಶ್ ಕಡ್ಗಿಮನೆ ,ವಿಶ್ವನಾಥ ಗರಡಿಮನೆ, ಉಮೇಶ್ ಕಡ್ಗಿಮನೆ, ಯೋಗೇಶ್ ಕೋಡಿ, ಅಜಿತ್ ಪೂಜಾರಿ, ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು
ವರದಿ : ದಿನೇಶ್ ರಾಯಪ್ಪನಮಠ
Advertisement. Scroll to continue reading.
In this article:billava sangha kundapura, felicitate, Kundapura, narayayana guru sangha, power lifting, saligrama, Uttarpradesh
Click to comment