Connect with us

Hi, what are you looking for?

Diksoochi News

Uncategorized

ಬ್ರಹ್ಮಾವರ : ಡಿವೈಡರ್ ನಲ್ಲಿ ನೆಡಲಾದ ಹೂ ಗಿಡಗಳನ್ನು ಕಡಿದ ಕಿಡಿಗೇಡಿಗಳು; ದೂರು ದಾಖಲು

0

ಬ್ರಹ್ಮಾವರ : ಉಪ್ಪೂರು ರಾ. ಹೆ. 66 ರ ಡಿವೈಡರ್ ನಲ್ಲಿ ನೆಡಲಾದ ಹೂವಿನ ಗಿಡವನ್ನು ಯಾರೋ ದುಷ್ಕರ್ಮಿ ರಾತ್ರಿ ಹೊತ್ತಿನಲ್ಲಿ ಕಡಿದಿದ್ದಾರೆ. ಇದನ್ನು ಪಾಲನೆ ಪೋಷಣೆ ಮಾಡಲು ಗುತ್ತಿಗೆ ಪಡೆದಿರುವ ನವಯುಗ ಸಂಸ್ಥೆಯು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬ್ರಹ್ಮಾವರ ಪೆÇಲೀಸರು ಇಲ್ಲಿನ ಹಲವಾರು ಭಾಗದ ಸಿಸಿ ಟಿವಿ ಪೂಟೇಜ್ ತಪಾಸಣೆ ನಡೆಸುತ್ತಿದ್ದಾರೆ.


ನಗರದ ಸೌಂದರ್ಯ ಹೆಚ್ಚಿಸಲು, ಹಸಿರು ಪರಿಸರ ನಿರ್ಮಾಣದ ಸಲುವಾಗಿ ಡಿವೈಡರ್ ನಲ್ಲಿ ಹೂ ಗಿಡಗಳನ್ನು ನೆಡಲಾಗುತ್ತದೆ. ಗಿಡಗಳಿಗೆ ಪ್ರತಿ ದಿನವೂ ನೀರನ್ನು ಹಾಕಿ ಪೆÇೀಷಣೆ ಮಾಡಲಾಗುತ್ತಿದೆ. ಕುರುಚಲು ಗಿಡವನ್ನು ಬೆಳೆಯದಂತೆ ಕಳೆ ತೆಗೆಯುವ ಕಾರ್ಯವೂ ನಡೆಯುತ್ತದೆ. ಆದರೆ ವಿಘ್ನ ಸಂತೋಷಿಗಳ ಕುಕೃತ್ಯ ಮನಸ್ಥಿತಿಗೆ ಗಿಡಗಳು ನಾಶವಾಗಿದ್ದು, ನಿಜಕ್ಕೂ ಬೇಸರದ ಸಂಗತಿ.

Please Support Us : Diksoochi Tv YouTube👇🏻👇🏻👇🏻
https://www.youtube.com/channel/UCdyqamlIaw9Mq3y6Giar9RQ/featured
Subscribe & Like ❤️

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!