Connect with us

Hi, what are you looking for?

Diksoochi News

Uncategorized

ಉಡುಪಿ : ಯುವವಾಹಿನಿ ವತಿಯಿಂದ ಸ್ತನ ಕ್ಯಾನ್ಸರ್ ಕುರಿತು `ಎದೆಯಾಳದ ಮಾತು’ ಮತ್ತು ಉಚಿತ ತಪಾಸಣೆ ಶಿಬಿರ

0

ಉಡುಪಿ : “ಇಂತಹ ಕಾರ್ಯಕ್ರಮವೊಂದನ್ನು ಮಾಡಬೇಕೆಂಬ ನಮ್ಮ ಬಹುಕಾಲದ ಕನಸು ಇಂದು ನೆರವೇರುತ್ತಿದೆ. ಇಂತಹ ಇನ್ನೂ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬ ಯೋಚನೆ ಇದ್ದು, ಮುಂದಿನ ದಿನಗಳಲ್ಲಿ ಇಂತಹ ಉತ್ತಮ ಕಾರ್ಯಕ್ರಮಗಳನ್ನು ನಮ್ಮ ಘಟಕವು ಹಮ್ಮಿಕೊಳ್ಳಲಿದೆ ಎಂದು ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ಜಗದೀಶ್ ಹೇಳಿದರು. ಅವರು
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ(ರಿ) ಉಡುಪಿ ಘಟಕದ ವತಿಯಿಂದ ನಡೆದ ತಜ್ಞ ವೈದ್ಯರೊಂದಿಗೆ ಸ್ತನ ಕ್ಯಾನ್ಸರಿನ ಕುರಿತು ಮಾಹಿತಿ – “ಎದೆಯಾಳದ ಮಾತು” ಕಾರ್ಯಕ್ರಮ ಮತ್ತು ಉಚಿತ ತಪಾಸಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕರಾದ ಶ್ರೀಮತಿ ಸಂಧ್ಯಾ ಕುಳಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕಾರ್ಯಕ್ರಮದ ಬಳಿಕ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರಾದ ಪ್ರೊಫೆಸರ್ ಡಾ. ಕೇರನ್ ಡಿಸೋಜ, ಡಾ.ಸುಪ್ರಿಯಾ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಈ ಸಂದರ್ಭ ಸಂತೋಷ್ ಕುಮಾರ್, ಶ್ರೀಮತಿ ಹೇಮಲತಾ ಮೊದಲಾದವರು ಉಪಸ್ಥಿತರಿದ್ದರು. ಉಡುಪಿ ಘಟಕದ ಮಹಿಳಾ ಸಂಚಾಲಕಿ ಕು.ನವೀಶ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಶ್ರೀಮತಿ ಮಾಲತಿ ಅಮೀನ್ ವಂದಿಸಿದರು. ಕುಮಾರಿ ಶ್ರೀಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.


Please Support Us : Diksoochi Tv YouTube👇🏻👇🏻👇🏻

https://www.youtube.com/channel/UCdyqamlIaw9Mq3y6Giar9RQ/featured

Subscribe & Like ❤️

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!