ಕೊಲ್ಲೂರು:ಶ್ರೀ ಮೂಕಾಂಬಿಕಾ ದೇವಿಯ ಉತ್ಸವ ಮೂರ್ತಿಯೊಂದಿಗೆ ಜಾತ್ರಾ ಸಮಯದಲ್ಲಿ ರಥ ಬೀದಿಯಲ್ಲಿ ಸಾಗುವ ಬ್ರಹ್ಮ ರಥವು ಸರಿಸುಮಾರು 600 ವರ್ಷದ ಹಿಂದೆ ವಿಜಯ ನಗರ ಸಂಸ್ಥಾನದ ಕೊಡುಗೆ ಆಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಶ್ರೀ ದೇವಿಯ ಜಾತ್ರೆಗೆ ಬಳಸಲು ಯೋಗ್ಯವಲ್ಲದ ಪರಿಸ್ಥಿತಿಯಲ್ಲಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶಿಥಿಲಗೊಂಡ ಬ್ರಹ್ಮರಥದ ಬದಲಾಗಿ ನೂತನ ಬ್ರಹ್ಮ ರಥದ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕಾಗಿ ದೇವಾಲಯದ ಆಡಳಿತ ವರ್ಗ,ಕಾರ್ಯ ನಿರ್ವಹಣಾಧಿಕಾರಿಗಳಿಗೆ ವಿಶ್ವಹಿಂದೂ ಪರಿಷತ್ ಬಜರಂಗದಳ,ಭಕ್ತಾಭಿಮಾನಿಗಳು ಹಾಗೂ ಊರಿನ ಸಮಸ್ತರ ಪರವಾಗಿ ಮನವಿ ಸಲ್ಲಿಸಲಾಯಿತು.
ವರದಿ : ದಿನೇಶ್ ರಾಯಪ್ಪನಮಠ
Advertisement. Scroll to continue reading.