ಬ್ರಹ್ಮಾವರ : ಕೋವಿಡ್ ಹರಡುವಿಕೆ ತಡೆಗಟ್ಟುವಿಕೆ ಮತ್ತು ಹತೋಟಿಗೆ ತರುವ ಉದ್ದೇಶದಿಂದ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಗತ್ಯ ಸೇವೆಗಳ ಹೊರತಾಗಿ ಉಳಿದವುಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಹೀಗಾಗಿ ಬ್ರಹ್ಮಾವರ ತಾಲೂಕಿನಲ್ಲಿ ಶುಕ್ರವಾರ ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದ ಕಂದಾಯ ಇಲಾಖೆಯ ತಂಡ ಇಲ್ಲಿನ ಬಸ್ ನಿಲ್ದಾಣದ ಬಳಿಯಲ್ಲಿರುವ ಕೆಲವು ಅಂಗಡಿಗಳನ್ನು ಮುಚ್ಚಿಸಿದರು. ಮಾಲ್ ಗಳು, ಶೋರೂಂನ್ನು ಬಂದ್ ಮಾಡಿಸಲಾಯಿತು.
ಮಾರ್ಗ ಸೂಚಿಯಂತೆ ಇರುವ ಹಣ್ಣು ತರಕಾರಿ ದಿನಸಿ ಮತ್ತು ಮೆಡಿಕಲ್ ಶಾಪ್ ಸೆಲೂನುಗಳು ತೆರೆದಿದ್ದವು. ಬಹತೇಕ ಜನರು ಸ್ವಯಂ ಸ್ಥೂರ್ತಿಯಿಂದ ಅಂಗಡಿಗಳನ್ನು ಮುಚ್ಚಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣಾ ಅಧಿಕಾರಿ ಗುರುನಾಥ್ ಬಿ .ಹಾದಿಮನೆ ಮತ್ತು ಸಿಬ್ಬಂದಿಗಳು ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಿದ್ದರು.
ವರದಿ : ಬಿ.ಎಸ್.ಆಚಾರ್ಯ
Advertisement. Scroll to continue reading.