Connect with us

Hi, what are you looking for?

Diksoochi News

Uncategorized

ಉಡುಪಿ : ರಾತ್ರಿಯಿಂದ ಲಾಕ್ ಡೌನ್; ಇಂದು ಜನ ಸಂಚಾರ ವಿರಳ

0

ಉಡುಪಿ : ಹೆಚ್ಚುತ್ತಿರುವ ಕೊರೋನಾ ಸೋಂಕನ್ನು ತಡೆಗಟ್ಟಲು ಇಂದು ರಾತ್ರಿಯಿಂದ 14 ದಿನಗಳ ಕಾಲ ಕರ್ನಾಟಕದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಉಡುಪಿಯಲ್ಲಿ ಇಂದು ಜನಸಂಖ್ಯೆ ವಿರಳವಾಗಿದೆ. ಅಂಗಡಿ-ಮುಂಗಟ್ಟುಗಳ ಮುಂದೆಯೂ ಜನರು ಹೆಚ್ಚಾಗಿ ಸುಳಿದಿಲ್ಲ.

ಎಂದಿನಂತೆ ಬಸ್ ಸಂಚಾರ

ಬಸ್ ಸಂಚಾರ ಎಂದಿನಂತೆ ಇದೆ. ದೈನಂದಿನಂತೆ ಬಸ್‍ಗಳು ಸಂಚರಿಸುತ್ತಿವೆ. ಆದರೆ, ನಾಳೆಯಿಂದ ಬಸ್ ಸಂಚರಿಸುವಂತಿಲ್ಲ. ಸಾರಿಗೆ ವ್ಯವಸ್ಥೆಗೆ ಸಂಪೂರ್ಣ ಬಂದ್ ಆಗಲಿದೆ.

ತೆರೆದಿವೆ ಅಂಗಡಿ ಮುಂಗಟ್ಟುಗಳು

ಎಂದಿನಂತೆ ಅಂಗಡಿಗಳು ತೆರೆದಿವೆ. ಕೆಲವು ಅಂಗಡಿ ಮಾಲೀಕರು ಅಂಗಡಿ ಬಾಗಿಲು ತೆರೆದಿಲ್ಲ. ಆದರೆ, ನಾಳೆ ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ. ಆದರೆ ಅಗತ್ಯ ವಸ್ತುಗಳ ಅಂಗಡಿಗಳು ನಾಳೆ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ತೆರೆದಿರಲು ಅವಕಾಶವಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!