ಕುಂದಾಪುರ: ವಿಶ್ವ ಹಿಂದೂ ಪರಿಷತ್ ,ಬಜರಂಗದಳ ಕುಂದಾಪುರ ವತಿಯಿಂದ ಐದು ದಿನಗಳ ಕಾಲ ನಡೆಯುವ ರಕ್ತದಾನ ಅಭಿಯಾನದ ಉದ್ಘಾಟನೆ ನಡೆಯಿತು.
ಇಂಡಿಯನ್ ರೆಡ್ ಕ್ರಾಸ್ ನ ರಕ್ತನಿಧಿ ಬ್ಲಡ್ ಬ್ಯಾಂಕ್ ಆವರಣದಲ್ಲಿ ಆರೆಸ್ಸೆಸ್ ಮುಖಂಡ ಸುಬ್ರಹ್ಮಣ್ಯ ಹೊಳ್ಳ ಅವರು ಉದ್ಘಾಟಿಸಿದರು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಭಾಪತಿ ಎಸ್ .ಜಯಕರ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಗಣೇಶ್ ಆಚಾರ್, ಕೋವಿಡ್ ಆಸ್ಪತ್ರೆ ನೋಡಲ್ ವೈದ್ಯಾಧಿಕಾರಿ ಡಾ,ನಾಗೇಶ್, ಸಂಘಟನೆಯ ಪ್ರಮುಖರಾದ ಗಿರೀಶ್, ವಸಂತ್ ಪುತ್ರನ್ ಸಂಗಮ್ ಮೊದಲಾದವರು ಉಪಸ್ಥಿತರಿದ್ದರು.