ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕಳೆದ ವರ್ಷ ಮಾರ್ಚ್ ನಲ್ಲಿ ಪ್ರಾರಂಭಗೊಂಡ ಕೋವಿಡ್ ೧೯ ವೈರಸ್ ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಅಲ್ಲದೇ ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಹೇರಿ ಕೊರೋನಾ ಕಟ್ಟಿಹಾಕಲು ಆಯಾ ರಾಜ್ಯ ಸರಕಾರಗಳು ಪಣತೊಟ್ಟವು. ಅದರಂತೆ ಬೆಂಗಳೂರಿನಲ್ಲಿದ್ದುಕೊಂಡು ಕೋವಿಡ್ ಟಾಸ್ಕ್ ಫೋರ್ಸ್ ಟೀಮ್ ಕಟ್ಟಿಕೊಂಡು ಕೋವಿಡ್ ವಿರುದ್ಧ ತೊಡೆ ತಟ್ಟಿದ ಬೇಳೂರು ರಾಘವೇಂದ್ರ ಶೆಟ್ಟಿ ನೇತ್ರತ್ವದ ತಂಡ ಕಳೆದ ವರ್ಷ ತನ್ನ ಹುಟ್ಟೂರು ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ನಿರ್ಗತಿಕ ಅನೇಕ ಕುಟುಂಬಗಳಿಗೆ ಆಹಾರ ,ಔಷಧ ವಿತರಿಸುವ ಮೂಲಕ ಮನೆಮಾತಾಗಿದ್ದರು.
ಆದರೆ ಇದೀಗ ಪುನಃ ರಾಜ್ಯದ ವಿವಿಧ ಕಡೆಗಳಿಗೆ ತೆರಳಿ ಸರಕಾರದ ಮಾರ್ಗಸೂಚಿಯಂತೆ ವಿವಿಧ ಕಡೆಗಳಿಗೆ ಸಂಚರಿಸಿ ಕೋವಿಡ್ ಆರೋಗ್ಯ ಕಿಟ್ ಹಂಚುವ ಮೂಲಕ ಮಾದರಿ ಕಾರ್ಯ ನಿರ್ವಹಿಸಿದ್ದಾರೆ. ಅದರಂತೆ ಬುಧವಾರ ಕೋಟ ಗ್ರಾಮಪಂಚಾಯತ್ ಭೇಟಿ ನೀಡಿ ಕೊರೋನಾ ಪಾಸಿಟಿವ್ ಬಂದ ಮಣೂರು ತಾಲೂಕು ಪಂಚಾಯತ್ ಸದಸ್ಯೆ ಲಲಿತಾ ಪೂಜಾರಿ ಮನೆಗೆ ಭೇಟಿ ನೀಡಿ ಮತ್ತೊಮ್ಮೆ ತಮ್ಮ ಟಾಸ್ಕ್ ಫೋರ್ಸ್ ಟೀಮ್ ಹುಟ್ಟೂರು ಪರಿಸರದಲ್ಲಿ ಕಾರ್ಯಚರಿಸಲು ಅಣಿಯಾಯಿತು.