ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ದೇಶದಾದ್ಯಂತ 2ನೇ ಕೋವಿಡ್ ಅಲೆ ಅಪ್ಪಳಿಸಿ ಜನರಿಗೆ ಮಾರಕವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಬ್ರಹ್ಮಾವರ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ತಾಲೂಕಿನ 2 ಹೋಬಳಿಯ 52 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2 ದಿನದ ಜಾಗೃತಿ ಪ್ರಚಾರ ಅಭಿಯಾನಕ್ಕೆ ಶನಿವಾರ ಬ್ರಹ್ಮಾವರ ಪೋಲೀಸ್ ಠಾಣೆಯ ಏ. ಎಸ್. ಐ ಸುಂದರ್ ಚಾಲನೆ ನೀಡಿದರು.
ಶನಿವಾರ ಇಲ್ಲಿನ ಬಸ್ ನಿಲ್ದಾಣದ ಬಳಿಯಿಂದ ಹೊರಟ 6 ಅಟೋ ರಿಕ್ಷಾದಲ್ಲಿ ಗ್ರಾಮೀಣ ಭಾಗ ಸೇರಿದಂತೆ ಎಲ್ಲಾ ಕಡೆಯಲ್ಲಿ ಸರಕಾರದ ಆದೇಶ ಮತ್ತು ಮಾರ್ಗ ಸೂಚಿಯನ್ನು ಪಾಲಿಸುವಂತೆ ಮೈಕ್ ಮೂಲಕ ಪ್ರಚಾರ ಮಾಡಲಾಗುತ್ತದೆ ಮತ್ತು ಅತೀ ತುರ್ತು ಸಂದರ್ಭದಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ಯಾವೂದೇ ಸಂದರ್ಭದಲ್ಲಿ ನಿಗದಿತ ಅಟೋದಲ್ಲಿ ಸರಕಾರಿ ಆಸ್ಪತ್ರೆಗೆ ಉಚಿತವಾಗಿ ಸೇರ್ಪಡೆ ಮಾಡಲಾಗುವುದು.
ಸಮಿತಿಯ ಅಧ್ಯಕ್ಷ ಬಾರಕೂರು ಸತೀಶ್ ಪೂಜಾರಿ , ಉಪಾಧ್ಯಕ್ಷ ಮಂದಾರ ಶೆಟ್ಟಿ ಪಧಾಧಿಕಾರಿಗಳಾದ ಸದಾಶಿವ ಪೂಜಾರಿ , ಅಕ್ಬರ್ ಭಾಷಾ , ಉಮೇಶ್ ಪೂಜಾರಿ.ಹರೀಶ್ಚಂದ್ರ . ಕೃಷ್ಣ ಶೇರಿಗಾರ್ ಇನ್ನಿತರು ಹಾಜರಿದ್ದರು.