ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಕೊರೋನಾ ಎರಡನೆ ಅಲೆಯ ನಿಯಂತ್ರಣಕ್ಕೆ ಸರಕಾರ ಹೇರಿದ ಲಾಕ್ ಡೌನ್ ಗೆ ನಗರದಲ್ಲಿ ಉತ್ತಮ ಸ್ಪಂದನೆ ದೊರಕಿತು. ಜನರು ಕಾಲ್ನಡಿಗೆಯಲ್ಲಿ ಅಂಗಡಿಗಳಿಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಿದರು.
ನಗರದ ಶಾಸ್ತ್ರಿ ವೃತ್ತ ಮತ್ತು ಸಂಗಮ್ ಜೆಂಕ್ಷನ್ ಗಳಲ್ಲಿ ಪೋಲಿಸರು ಚೆಕ್ ಪೋಸ್ಟ್ ರಚಿಸಿ ವಾಹನಗಳನ್ನು ತಪಾಸಣೆ ನಡೆಸಿ ಓಡಾಟಕ್ಕೆ ಅನುವು ಮಾಡಿ ಕೊಟ್ಟರು.
ಅನಗತ್ಯ ತಿರುವವರ ವಾಹನಗಳನ್ನು ಸೀಜ್ ಮಾಡಲಾಯಿತು.
ಕೂಲಿ ಕಾರ್ಮಿಕರಿಗೆ ಕಷ್ಟ
Advertisement. Scroll to continue reading.
ದೂರದ ಊರಿನಿಂದ ತುತ್ತು ಅನ್ನಕ್ಕಾಗಿ ಇಲ್ಲಿಗೆ ಬಂದ ಕಾರ್ಮಿಕರು ಕೆಲಸದ ಸ್ಥಳ ತಲುಪುವುದಕ್ಕಾಗಿ ಕಿ.ಮೀ ಗಟ್ಟಲೇ ನಡೆದ ದೃಶ್ಯಗಳು ಕಂಡು ಬಂದವು.
ಗ್ಲೌಸ್ ಹಾಕಿ ಚೆಕ್ ಮಾಡಲು ಹೇಳಿದ ಡಿವೈಎಸ್ಪಿ
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುವ ಪೋಲಿಸ್ ಸಿಬ್ಬಂದಿಗಳಿಗೆ ಗ್ಲೌಸ್ ನೀಡಿ, ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಗ್ಲೌಸ್ ಹಾಕಿಕೊಂಡು ತಪಾಸಣೆ ನಡೆಸುವಂತೆ ಸೂಚಿಸಿದರು.
Advertisement. Scroll to continue reading.