Connect with us

Hi, what are you looking for?

Diksoochi News

Uncategorized

ಉಡುಪಿ : ಹಿಂದು ಜಾಗರಣ ವೇದಿಕೆ ಉಪ್ಪೂರು ಸೇರಿದಂತೆ ಹಲವು ಸಂಘಟನೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರ

0

ಉಡುಪಿ : ಹಿಂದು ಜಾಗರಣ ವೇದಿಕೆ ಉಪ್ಪೂರು, ಹಾವಂಜೆ, ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ, ಹಾವಂಜೆ ಗ್ರಾಮ ವಿಕಾಸ ಸಮಿತಿ – ರಕ್ತನಿಧಿ ಸಮಿತಿ, ಸೇವಾ ಭಾರತಿ, ಅಭಯ ಹಸ್ತ ಹೆಲ್ಪ್ ಲೈನ್, ಕೆಎಂಸಿ ರಕ್ತನಿಧಿ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಬೆಳ್ಳಂಪಳ್ಳಿ ಶ್ರೀವಿಶ್ವಕರ್ಮ ಸಮಾಜೋದ್ಧಾರಕ ಸಂಘದಲ್ಲಿ ನಡೆಯಿತು. ಶಿಬಿರವನ್ನು ಬ್ರಹ್ಮಾವರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕರಾದ ಡಾ.ಶ್ರೀನಿವಾಸ ತೋಡ್ತಿಲ್ಲಾಯ ಮತ್ತು ಸತೀಶ್ ಸಾಲ್ಯಾನ್ ಮಣಿಪಾಲ ಉದ್ಘಾಟಿಸಿದರು.
ಉಡುಪಿ : ಹಿಂದು ಜಾಗರಣ ವೇದಿಕೆ ಉಪ್ಪೂರು, ಹಾವಂಜೆ, ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ, ಹಾವಂಜೆ ಗ್ರಾಮ ವಿಕಾಸ ಸಮಿತಿ – ರಕ್ತನಿಧಿ ಸಮಿತಿ, ಸೇವಾ ಭಾರತಿ, ಅಭಯ ಹಸ್ತ ಹೆಲ್ಪ್ ಲೈನ್, ಕೆಎಂಸಿ ರಕ್ತನಿಧಿ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಬೆಳ್ಳಂಪಳ್ಳಿ ಶ್ರೀವಿಶ್ವಕರ್ಮ ಸಮಾಜೋದ್ಧಾರಕ ಸಂಘದಲ್ಲಿ ನಡೆಯಿತು. ಶಿಬಿರವನ್ನು ಬ್ರಹ್ಮಾವರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕರಾದ ಡಾ.ಶ್ರೀನಿವಾಸ ತೋಡ್ತಿಲ್ಲಾಯ ಮತ್ತು ಸತೀಶ್ ಸಾಲ್ಯಾನ್ ಮಣಿಪಾಲ ಉದ್ಘಾಟಿಸಿದರು.


ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಮೆಂಡನ್, ಭಾರತೀಯ ಜನತಾ ಪಕ್ಷದ ಹಿಂ. ವ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಹಾವಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಜಿತ್ ಗೋಳಿಕಟ್ಟೆ, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುರಂದರ ಕೋಟ್ಯಾನ್, ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರಾದ ಧರಣೀಶ್ ಅಮೀನ್ ,ಹಿಂದು ಜಾಗರಣ ವೇದಿಕೆ ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ರವೀಂದ್ರ ಹೇರೂರು,ಹಾವಂಜೆ ಘಟಕದ ಅಧ್ಯಕ್ಷರಾದ ಅಶೋಕ್ ಶೇಡಿಗುಳಿ, ಹಾವಂಜೆ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷರಾದ ಸತ್ಯನಾರಾಯಣ ಆಚಾರ್ಯ, ರಕ್ತ ನಿಧಿ ಪ್ರಮುಖ್ ಹಾವಂಜೆ ಗ್ರಾಮ ವಿಕಾಸ ಸಮಿತಿ ಮನೋಜ್ ಪಾಲನ್, ಉದ್ಯಮಿಗಳಾದ ಪ್ರವೀಣ್ ಪ್ರಭು ಕುಕ್ಕೆಹಳ್ಳಿ, ಕೆಎಂಸಿ ಮಣಿಪಾಲದ ರಕ್ತನಿಧಿ ವಿಭಾಗದ ವೈದ್ಯರಾದ
ಡಾ. ಫಾತೀಮ ಉಪಸ್ಥಿತರಿದ್ದರು.
ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಪ್ರಸಾದ್ ಸುವರ್ಣ ಹಾವಂಜೆ ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಪ್ರಸಾದ್ ಸುವರ್ಣ ಹಾವಂಜೆ ಸ್ವಾಗತಿಸಿದರು,ಅಶ್ವಿನಿ ಆಚಾರ್ಯ ವಂದಿಸಿದರು.ದಯಾನಂದ್ ಕರ್ಕೇರ ಉಗ್ಗೆಲ್ಬೆಟ್ಟು ನಿರೂಪಿಸಿದರು.

ಶಿಬಿರದಲ್ಲಿ 115 ದಾನಿಗಳಂದ 93 ಯುನಿಟ್ ರಕ್ತ ಸಂಗ್ರಹಿಸಿ ಕೆಎಂಸಿ ರಕ್ತ ನಿಧಿ ವಿಭಾಗಕ್ಕೆ ಹಸ್ತಾಂತರಿಸಲಾಯಿತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!