ಕುಂದಾಪುರ: ಕರೋನಾ ಎರಡನೇ ಅಲೆಯಿಂದಾಗಿ ಕರ್ನಾಟಕ ಲಾಕ್ ಡೌನ್ ಆಗಿದ್ದು ಜನ ಸಾಮಾನ್ಯರು ಸಮಸ್ಯೆಯಲ್ಲಿದ್ದಾರೆ.ಈ ಹಿನ್ನೆಲೆಯಲ್ಲಿ ಗಂಗೊಳ್ಳಿ ವೆಲ್ ಫೇರ್ ಫೆಡರೇಶನ್ ವತಿಯಿಂದ ಕುಂದಾಪುರ, ಗಂಗೊಳ್ಳಿ, ವಂಡ್ಸೆ ಭಾಗದ ಮನೆಗಳಿಗೆ ತೆರಳಿ ಅಗತ್ಯ ಸಾಮಾಗ್ರಿಗಳ ಕಿಟ್ ಅನ್ನು ವಿತರಿಸಲಾಯಿತು.
ಈ ಬಗ್ಗೆ ಮಾತಾಡಿದ ಸಂಸ್ಥೆಯ ಪ್ರಮುಖರು, ಗಂಗೊಳ್ಳಿ ಸೋಶಿಯಲ್ ವೆಲ್ ಫೇರ್ ಫೆಡರೇಶನ್ ಸಂಘಟನೆಗೆ ಮೂವತ್ತೇಳು ವರ್ಷ ಗಳಿಂದ ಬಡ ಜನರಿಗೆ ನೆರವಾಗುತ್ತಿದೆ. ಕೊರೋನಾ ಸಂದರ್ಭದಲ್ಲಿ ಕಳೆದ ವರ್ಷ ಸುಮಾರು 400 ಗಂಗೊಳ್ಳಿ ಪರಿಸರದ ಬಡ ಕುಟುಂಬಗಳಿಗೆ ಕಿಟ್ ಗಳನ್ನು ಕೊಟ್ಟಿದ್ದೇವೆ. ಕೊರೋನಾ ಎರಡನೇ ಅಲೆಯ ಈ ಸಂದರ್ಭದಲ್ಲಿ ಈ ವರೆಗೆ ಸುಮಾರು 450 ಬಡ ಕುಟುಂಬಗಳಿಗೆ ವಿಶೇಷ ಕಿಟ್ ವಿತರಿಸಿದ್ದೇವೆ. ಜನರ ಹಿತದೃಷ್ಟಿಯಿಂದ ಮನೆ ಮನೆಗೆ ಕಿಟ್ ವಿತರಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
In this article:Diksoochi news, diksoochi Tv, diksoochi udupi, Gangolli Social Help fair Federation, Kundapura
Click to comment