Connect with us

Hi, what are you looking for?

Diksoochi News

Uncategorized

ಬ್ರಹ್ಮಾವರ : ಪೊಲೀಸರಿಗೆ ಹಾಗೂ ಹಸಿದವರಿಗೆ ಊಟ ನೀಡುತ್ತಿದ್ದಾರೆ ಉದ್ಯಮಿ ಸತ್ಯನಾಥ್ ಪೈ

0

ಬ್ರಹ್ಮಾವರ: ಸತ್ಯನಾಥ ಜವುಳಿ ಮಳಿಗೆಯ ಮಾಲಕರು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಹೋಟೇಲ್‍ಗಳು ಪಾರ್ಸೆಲ್ ಆಹಾರ ಮಾತ್ರ ನೀಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ವಾರಿಯರ್ಸ್ ಎನ್ನಲಾದ ಪೊಲೀಸರಿಗೆ ಪ್ರತೀ ದಿನ ಮಧ್ಯಾಹ್ನ ಊಟ ಮತ್ತು ಸಂಜೆ ಟಿಫನ್ ವ್ಯವಸ್ಥೆಯನ್ನು ಠಾಣೆಗೆ ನೀಡುತ್ತಿದ್ದಾರೆ. ಅದೇ ರೀತಿಯಲ್ಲಿ ಇಲ್ಲಿನ ಸುತ್ತ ಮುತ್ತ ಪರಿಸರದ ಬಸ್ ನಿಲ್ದಾಣ, ಸಂತೆ ಮಾರುಕಟ್ಟೆ ಬಳಿಯಲ್ಲಿ ಹಸಿವಿನಿಂದ ಬಳಲುವವರಿಗೆ ಶಿವಳ್ಳಿ ಹೋಟೇಲ್ ನಿಂದ ಸಿದ್ಧಪಡಿಸಿದ ಊಟದ ಜೊತೆ ಕುಡಿಯಲು ನೀರಿನ ಬಾಟಲನ್ನು ನೀಡುತ್ತಿದ್ದಾರೆ.


ಮಧ್ಯಾಹ್ನ 12 ಗಂಟೆಗೆ ಹೋಟೇಲ್ ನಿಂದ ಮಾಡಿಸಿಕೊಂಡ ಊಟದ ಪಾರ್ಸೇಲ್‍ನ್ನು ಮಾಲಕರ ಮಗ ಗಿರಿಧರ್ ಪೈ ಸ್ವತಹ: ವಾಹನ ಚಾಲನೆ ಮಾಡಿಕೊಂಡು ಇಬ್ಬರು ಬಂಧುಗಳೊಂದಿಗೆ ಕುಂಜಾಲು, ಹೇರೂರು ಉಪ್ಪೂರು, ಸಂತೆಕಟ್ಟೆ, ಕೋಟ, ಸಾಯಿಬರ ಕಟ್ಟೆ , ಬಾರಕೂರು ಭಾಗದಲ್ಲಿ ಅಗತ್ಯ ಇರುವ ಜನರಿಗೆ ನೀಡುತ್ತಾರೆ.
ಪ್ರತೀ ದಿನ 100 ಊಟ ಮತ್ತು ಉಪಹಾರ ಇಲ್ಲಿಂದ ಪರಿಸರದ ಜನರಿಗೆ ವಿತರಣೆ ಯಾಗುತ್ತಿದ್ದು, ಇದು ಲಾಕ್ ಡೌನ್ ಇರುವಷ್ಟು ದಿನ ಮುಂದುವರಿಯಲಿದೆ ಎಂದು ಇದರ ರೂವಾರಿ ಸತ್ಯನಾಥ್ ಪೈ ತಿಳಿಸಿದ್ದಾರೆ.

ಇಲ್ಲಿನ 5 ಕಿಮಿ ಪರಿಸರದವರು ಆಹಾರದ ಅಗತ್ಯತೆ ಇರುವವರು ಮೊಬೈಲ್ ಸಂಖ್ಯೆ 7829799977 ಮತ್ತು 9632588183 ಸಂಪರ್ಕಿಸಬಹುದು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!