ವರದಿ : ಮಹೇಶ್
ಬೈಂದೂರು : ತೌಕ್ತೆ ಚಂಡಮಾರುತದ ಹಿನ್ನಲೆ ಕರಾವಳಿ ಜನತೆಯ ಜೀವನ ಅಸ್ತವ್ಯಸ್ತವಾಗಿದೆ. ಬೈಂದೂರು ತಾಲೂಕಿನಲ್ಲಿ ನೂರಾರು ಅಧಿಕ ಮೀನುಗಾರ ಕುಟುಂಬಗಳು ಅಪಾಯದಲ್ಲಿವೆ. ಮೀನುಗಾರಿಕಾ ರಸ್ತೆಯನ್ನು ದಾಟಿ ಕಡಲ ಅಲೆಗಳು ಮೇಲೆ ಬರುತ್ತಿವೆ. ಮರವಂತೆ, ಉಪ್ಪುಂದ ಮತ್ತು ಬೈಂದೂರು ಸೋಮೇಶ್ವರ ಭಾಗದಲ್ಲಿ ಭಾರಿ ಗಾತ್ರದ ಅಲೆಗಳಿಂದ ಹಾನಿಯಾಗಿದೆ. ಈಗಾಗಲೇ ಮೀನುಗಾರರು
ಮೀನುಗಾರಿಕಾ ಬೋಟ್ ಮತ್ತು ಸಾಮಾಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಕಾಂಕ್ರೀಟ್ ರಸ್ತೆ ಸಮುದ್ರಪಾಲು
ಮರವಂತೆ ಭಾಗದ ಕಡಲ ತೀರದಲ್ಲಿ ಕಾಂಕ್ರೀಟ್ ರಸ್ತೆ ಸಮುದ್ರಪಾಲಾಗಿದೆ. ಹವಾಮಾನ ಇಲಾಖೆ ಇನ್ನೆರಡು ದಿನ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಕಡಲ್ಕೊರೆತ ತಡೆಯಲು ಹಾಕಿದ ಕಲ್ಲುಗಳು ಕೂಡ ಸಮುದ್ರಪಾಲಾಗಿದೆ. ಗಾಳಿ-ಮಳೆ ಇದೇ ರೀತಿ ಮುಂದುವರಿದರೆ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ.
ಕುಂದಾಪುರ ಎ.ಸಿ ಭೇಟಿ, ಪರಿಶೀಲನೆ
ಹಾನಿ ಸಂಭವಿಸಿದ ಸ್ಥಳಕ್ಕೆ ಕುಂದಾಪುರ ಎಸಿ ಕೆ ರಾಜು ಮತ್ತು ಬೈಂದೂರು ತಹಶೀಲ್ದಾರರಾದ ಶೋಭಾಲಕ್ಷ್ಮಿ ಭೇಟಿ ನೀಡಿದ್ದಾರೆ. ತುರ್ತು ಪರಿಸ್ಥಿತಿ ನೀಡುವಂತೆ ಸೂಚನೆ ನೀಡಿದ್ದಾರೆ.