ಕೋಲಾರ : ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಅಕ್ಕ-ತಂಗಿಯರನ್ನು ಉಮಾಪತಿ ಎಂಬ ಯುವಕ ಮದುವೆಯಾಗಿದ್ದಾರುವ ವಿಚಾರ ಸಕತ್ ವೈರಲ್ ಆಗಿತ್ತು. ಮಾತು ಬಾರದ ಅಕ್ಕನಿಗೆ ಮದುವೆಯಾಗುವುದಿಲ್ಲ, ಆಕೆಯ ಬದುಕು ಮುಂದೆ ಹೇಗೆ ಎಂದು ಚಿಂತಿತಳಾದ ತಂಗಿ, ಉಮಾಪತಿಯಲ್ಲಿ ತನ್ನೊಂದಿಗೆ, ಅಕ್ಕನನ್ನು ಮದುವೆಯಾಗುವಂತೆ ಕೇಳಿಕೊಂಡು ಮದುವೆ ಮಾಡಿಸಿದ್ದಳು ಎಂಬ ವಿಚಾರ ತಿಳಿಯುತ್ತಿದ್ದಂತೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಇದೀಗ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಅವರಲ್ಲಿ ತಂಗಿ ಅಪ್ರಾಪ್ತಳೆಂದು ತಿಳಿದು ಬಂದಿದೆ. 16 ವರ್ಷದವಳನ್ನು ಮದುವೆಯಾದ ಕಾರಣಕ್ಕೆ ಉಮಾಪತಿ ಕಂಬಿ ಎಣಿಸುವಂತಾಗಿದೆ.
ಇಬ್ಬರನ್ನು ಮದುವೆಯಾಗಿರುವ ವಿಚಾರ ವೈರಲಾಗುತ್ತಿದ್ದಂತೆ
ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಮದುವೆ ಬಗ್ಗೆ ಪರಿಶೀಲನೆ ನಡೆಸಲು ಆದೇಶಿಸಿದ್ದಾರೆ. ಆಗ ತಂಗಿ ಅಪ್ರಾಪ್ತೆ ಎಂದು ತಿಳಿದು ಬಂದಿದ್ದು, ಉಮಾಪತಿ ಸೇರಿ 7 ಮಂದಿ ವಿರುದ್ಧ ನಂಗಲಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
Advertisement. Scroll to continue reading.