Connect with us

Hi, what are you looking for?

Diksoochi News

Uncategorized

40 ಗಂಟೆಗಳ ಕಾರ್ಯಾಚರಣೆ; ಸಮುದ್ರದಲ್ಲಿ ಸಿಲುಕಿದ್ದ 9 ಮಂದಿ ಟಗ್ ಸಿಬ್ಬಂದಿಗಳ ರಕ್ಷಣೆ

0

ವರದಿ : ಶಫೀ ಉಚ್ಚಿಲ

ಕಾಪು : ಮೆ.15 ರಂದು ನವಮಂಗಳೂರು ಬಂದರಿನಿಂದ ಸಂಪರ್ಕ ಕಡಿತಗೊಂಡು ಚಂಡ ಮಾರುತ ಪ್ರತಾಪಕ್ಕೊಳಗಾಗಿ ಕಾಪು ಲೈಟ್ ಹೌಸ್ ಸಮೀಪದ 15 ಕಿ.ಮೀ ದೂರದಲ್ಲಿರುವ ಸಮುದ್ರ ಬಂಡೆ ಮಧ್ಯೆ ಸಿಲುಕಿಕೊಂಡಿದ್ದ 9 ಮಂದಿ ಕೋರಂಗಲ ಟಗ್ಗ್ ಸಿಬ್ಬಂದಿಗಳನ್ನು 40 ಗಂಟೆಗಳ ಬಳಿಕ ಸೋಮವಾರ ಕೊಚ್ಚಿನ್ ನಿಂದ ಆಗಮಿಸಿದ ರಕ್ಷಣೆ ಇಲಾಖೆಯ ಹೆಲಿಕಾಪ್ಟರ್ ಹಾಗೂ ಕೋಸ್ಟ್ ಗಾರ್ಡ್ ನೌಕೆ ಮೂಲಕ ರಕ್ಷಿಸಲಾಯಿತು.

ನವಮಂಗಳೂರು ಬಂದರಿನ ಹೊರವಲಯದಲ್ಲಿ ಮೂರಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೀ-ರೋಸ್ ಕಂಪನಿಗೆ ಸೇರಿದ ಕೋರಮಂಡಲ್ ಬೋಟ್ ಬಂದರು ಪ್ರವೇಶಿಸಲು ವಿಫಲವಾಗಿ, ಹತ್ತಿರದಲ್ಲೇ ಲಂಗರು ಹಾಕಿದ್ದು,ಶನಿವಾರ 11:30ರ ಸಮಯಕ್ಕೆಆಂಕರ್ ಮುರಿದು ಬೋಟ್ ಸಂಪರ್ಕ ಕಡಿತಗೊಂಡು ಕಾಪುವಿನತ್ತ ಸರಿದು ಬಂದು ಚಂಡ ಮಾರುತದ ಪ್ರತಾಪಕ್ಕೆ ಸಿಲುಕಿತ್ತು.

Advertisement. Scroll to continue reading.

ಭಾನುವಾರ ಕೋಸ್ಟ್ ಗಾರ್ಡ್,ಕರಾವಳಿ ಕಾವಲು ಪಡೆ
ರಕ್ಷಣಾ ಕಾರ್ಯಾಚರಣೆಗೆ ಪ್ರಯತ್ನಿಸ್ಸಿತ್ತಾದರು ಹವಾಮಾನ ವೈಪರೀತ್ಯದಿಂದ ಕಾರ್ಯಾಚರಣೆಗೆ ಅಡ್ಡಿಯಾದ ಹಿನ್ನೆಲೆ ಸೋಮವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸುವ ಮೂಲಕ ಟಗ್ಗ್ ನಲ್ಲಿ ಸಿಲುಕಿದ್ದ 9 ಮಂದಿ ಸಿಬ್ಬಂದಿಗಳನ್ನು ರಕ್ಷಿಸುವಲ್ಲಿ ರಕ್ಷಣಾ ತಂಡ ಯಶಸ್ಸು ಕಂಡಿದೆ.

ಈ ನಡುವೆ ಸ್ಥಳೀಯ ಮೀನುಗಾರರು ಹಾಗು ಮುಳುಗು ತಜ್ಞರು ರಕ್ಷಣೆಗೆ ಮುಂದಾದರೂ ಸಮರ್ಪಕ ವ್ಯವಸ್ಥೆ ಇಲ್ಲದೆ ಕಾರ್ಯಾಚರಣೆ ಕೈಬಿಟ್ಟಿದ್ದರು. ಕಾರ್ಯಾಚರಣೆ ವೀಕ್ಷಿಸಲು ಜನ ತಂಡೋಪತಂಡವಾಗಿ ಆಗಮಿಸಿದ್ದು, ಪೊಲೀಸರು ಅವರನ್ನು ಚದುರಿಸಿದರು.
ಸ್ಥಳದಲ್ಲಿ ಕಾಪು ವೃತ ನಿರೀಕ್ಷಕ ಪ್ರಕಾಶ್, ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಣಾಧಿಕಾರಿ ವಿವೇಕಾನಂದ ಗಾವ್ಕರ್, ಪುರಸಭೆ ಅಧ್ಯಕ್ಷ ಅನಿಲ್,
ಕರಾವಳಿ ಕಾವಲು ಪಡೆ ಹೆಜಮಾಡಿ ಠಾಣಾಧಿಕಾರಿ ಸುಜಾತ, ಕಾಪು ಠಾಣಾಧಿಕಾರಿ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!