Connect with us

Hi, what are you looking for?

Diksoochi News

Uncategorized

ಗ್ರಾಹಕರಿಂದ ದುಪ್ಪಟ್ಟು ದರ ವಸೂಲಿ ಮಾಡುವವರ ವಿರುದ್ಧ ದೂರು ನೀಡಿ : ಕಾಪು ತಹಶೀಲ್ದಾರ್

0

ವರದಿ: ಶಫೀ ಉಚ್ಚಿಲ

ಕಾಪು : ಇಲ್ಲಿನ ಪೇಟೆ ಭಾಗದ ಕೆಲವೊಂದು ದಿನಸಿ‌ ಹಾಗೂ ತರಕಾರಿ ಅಂಗಡಿಗಳಲ್ಲಿ ಸಾಮಾನ್ಯ ದರಕ್ಕಿಂತ ದುಪ್ಪಟ್ಟು ದರವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಪು ತಹಶೀಲ್ದಾರ್ ಪ್ರತಿಭಾ. ಆರ್. ಅಂತವರ ವಿರುದ್ಧ ಗ್ರಾಹಕರು ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡುವಂತೆ ಸೂಚಿಸಿದರು.

ಕೊರೋನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಇಂತಹ ಸಮಯದಲ್ಲಿ ಅಂಗಡಿ ಮಾಲಕರು ಜನರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದು ಸರಿಯಲ್ಲ.ಇದರಿಂದ ಜನಸಾಮಾನ್ಯರು ಮತ್ತಷ್ಟು ಇಕ್ಕಟ್ಟಿಗೆ ಸಿಳುಕುವಂತಾಗುತ್ತದೆ. ಅಂತವರ ಅಂಗಡಿ ಪರವಾನಿಗೆ ರದ್ದು ಮಾಡಲಾಗುವುದು ಎಂದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!