ಮಂಗಳೂರು : ಮೇ.21 ರಂದು ರಾಜೀವ್ ಗಾಂಧಿಯವರ ಪುಣ್ಯಸ್ಮರಣೆಯ ದಿನ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ 500 ಕಿಟ್ಗಳನ್ನು ಮತ್ತು ನಮ್ಮ ಕಂಪನಿ ಪನಾಮ ಕಾರ್ಪೋರೇಷನ್ ಲಿಮಿಟೆಡ್ ಮೂಲಕ 500 ಕಿಟ್ಗಳನ್ನು ವಿತರಿಸಲು ಹಾಗೂ ಪ್ರಾಯೋಜಿಸಲು ನಿರ್ಧರಿಸಿದ್ದೇವೆ. ನಾವು ನಮಗೆ ಎಲ್ಲಿಯವರೆಗೆ ಸಹಾಯ ಮಾಡಲು ಸಾಧ್ಯವಾಗುತ್ತದೆಯೋ ಅಲ್ಲಿಯವರೆಗೆ ಸಹಾಯಮಾಡಿ ಜನರಿಗೆ ಸೇವೆ ಸಲ್ಲಿಸುತ್ತೇವೆ ಎಂದು ಪನಾಮ ಕಾರ್ಪೋರೇಷನ್ ಲಿಮಿಟೆಡ್ ನ ವಿವೇಕ್ ರಾಜ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ದಿನಸಿ ಕಿಟ್ ಎರಡು ಜನರ ಕುಟುಂಬಕ್ಕೆ 15 ದಿನಗಳ ಅವಧಿಗೆ ಸಾಕು. ಪ್ರತಿ ಕಿಟ್ನ ಬೆಲೆ ಸುಮಾರು 800 ರೂ. – 1000 ರೂ. ಆಗಿರುತ್ತದೆ. ಈ ಲಾಕ್ಡೌನ್ ಸಮಯದಲ್ಲಿ ಇಂತಹ 1500 ಕಿಟ್ಗಳನ್ನು ಈಗಾಗಲೇ ವಿತರಿಸಲಾಗಿದೆ. ಮೇ. 21 ರಂದು ಬೆಳಗ್ಗೆ ವೆಲೆನ್ಸಿಯಾ ಪ್ರಾರಂಭವಾಗಿ ನಗರದ 4 ವಿವಿಧ ಕಡೆಗಳಲ್ಲಿ ಕಿಟ್ ವಿತರಣೆ ನಡೆಯಲಿದೆ. ಸುಮಾರು 1000 ಕ್ಕೂ ಹೆಚ್ಚು ದಿನಸಿ ಕಿಟ್ ವಿತರಣೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement. Scroll to continue reading.
In this article:Diksoochi news, diksoochi Tv, diksoochi udupi, mangalore, PANAMA corporation LTD
Click to comment