ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ದೇಶದಲ್ಲಿ ಕೊರೋನ ಮಹಾಮಾರಿಯಿಂದ ಜನರು ಸಂಕಷ್ಟದಲ್ಲಿರುವಾಗ ನಮ್ಮ ದೇಶದ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷರಾದ ಭದ್ರಾವತಿ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಇಡೀ ದೇಶದ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೊರೋನ ಸೊಂಕಿತರಿಗೆ ಆಕ್ಸಿಜನ್, ಬೆಡ್, ಹೋಮ್ ಐಸೋಲೇಷನ್ ಹೀಗೆ ಹತ್ತು ಹಲವು ರೀತಿಯಲ್ಲಿ ಜನರ ಜೊತೆ ನಿಂತಿರುವುದು ತಿಳಿದ ವಿಚಾರ.
ಹಾಗೆ ಕರ್ನಾಟಕ ರಾಜ್ಯದಲ್ಲಿ ಯುವ ಕಾಂಗ್ರೇಸ್ ಅಧ್ಯಕ್ಷರಾದ ರಕ್ಷಾ ರಾಮಯ್ಯರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಯುವ ಕಾಂಗ್ರೇಸ್ ಪದಾಧಿಕಾರಿಗಳು ಹೋಮ್ ಐಸೋಲೇಷನ್, ಕಿಟ್, ಬೆಡ್, ಆಹಾರ ಕಿಟ್ ಗಳನ್ನು ಸೊಂಕಿತರಿಗೆ ಬಡ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಾ ಬಂದಿರುವಾಗ, ಬಿಜೆಪಿ ಪಕ್ಷದ ಯುವಮೋರ್ಚಾದ ಕೆಲವೊಂದು ಸ್ಥಾಪಿತ ಹಿತ ಶಕ್ತಿಗಳು ಯುವ ಕಾಂಗ್ರೇಸ್ ಅಧ್ಯಕ್ಷರು ನೀಡುತ್ತಿರುವ ಹೋಮ್ ಐಸೋಲೇಷನ್ ಕಿಟ್ ಗಳಲ್ಲಿ ಕೊಡುವ ಮಾತ್ರೆಗಳು ಸರಿಯಿಲ್ಲವೆಂದು ಯುವ ಕಾಂಗ್ರೇಸ್ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ರಾಜ್ಯ ಯುವ ಕಾಂಗ್ರೇಸ್ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಹೇಳಿದರು.
ಯುವ ಕಾಂಗ್ರೇಸ್ ಅಧ್ಯಕ್ಷರಾದ ರಕ್ಷಾ ರಾಮಯ್ಯ ಅವರ ರಾಮಯ್ಯ ಆಸ್ಪತ್ರೆಯೂ ರಾಜ್ಯದಲ್ಲಿ ಸಾಕಷ್ಟು ಹೆಸರು ಇರುವಂತದ್ದು. ಅಲ್ಲದೆ ಬಿಜೆಪಿ ನಾಯಕರಿಗೆ ಅರೋಗ್ಯದಲ್ಲಿ ಏರುಪೇರಾದರೆ ಮೊದಲು ಹೋಗಿ ದಾಖಲಾಗುವುದು ಈ ರಾಮಯ್ಯ ಆಸ್ಪತ್ರೆಯಲ್ಲಿ. ಅಲ್ಲದೆ ಈ ಕೊರೋನ ಸೋಂಕಿತರಿಗೆ ನೀಡುವ ಮಾತ್ರೆಗಳನ್ನು ರಕ್ಷಾ ರಾಮಯ್ಯರು ಎಲ್ಲಾ ವೈದ್ಯರಲ್ಲಿ ಚರ್ಚಿಸಿ, ಎಲ್ಲಾ ವೈದ್ಯರ ಸೂಚನೆ ಮೇರೆಗೆ ಹೋಮ್ ಐಸೋಲೇಷನ್ ಕಿಟ್ ಗಳಲ್ಲಿ ಸೊಂಕಿತರಿಗೆ ಆ ಮಾತ್ರೆಯನ್ನು ನೀಡಿರುವುದು.
ಇಂತಹ ಜವಾಬ್ದಾರಿಯುತ ಆಸ್ಪತ್ರೆ ಇಟ್ಟು ಕೊಂಡಂತಹ ರಕ್ಷಾ ರಾಮಯ್ಯರ ಮೇಲೆ ಬಿಜೆಪಿ ಯುವ ಮೋರ್ಚಾದವರು ಅಪವಾದ ಮಾಡಿ ಪ್ರಕರಣ ದಾಖಲಿಸಿ ಜನರ ದಾರಿ ತಪ್ಪಿಸುತ್ತಿರುವುದು ಎಷ್ಟು ಸರಿ ಎಂದರು.
ಇಂಥ ಕಷ್ಟದ ಪರಿಸ್ಥಿತಿಯಲ್ಲಿ ರಕ್ಷಾ ರಾಮಯ್ಯರವರು ತಮ್ಮ ಸ್ವಂತ ಹಣದಿಂದ ಕೊರೋನ ಮೆಡಿಷನ್ ಗಳನ್ನು ಕೊರೋನ ಬಾಧಿತರಿಗೆ ನೀಡುತ್ತಿದ್ದಾರೆ. ಇಂತಹ ಒಳ್ಳೆಯ ಕೆಲಸ ಮಾಡುವಾಗ ಬಿಜೆಪಿ ಯುವ ಮೋರ್ಚಾದವರು ಅಡ್ಡಗಾಲು ಹಾಕುತ್ತಿರುವುದು ಅಯೋಗ್ಯತನ ಎಂದರು.
ಬಿಜೆಪಿ ಯುವ ಮೋರ್ಚಾದವರು ನಿಮ್ಮ ಅಧಿಕಾರವನ್ನು ದುರುಪಯೋಗ ಮಾಡಿ ಯುವ ಕಾಂಗ್ರೆಸ್ ಮೇಲೆ ಪ್ರಕರಣ ದಾಖಲು ಮಾಡಿದರೆ, ಅದನ್ನು ಎದುರಿಸುವ ಶಕ್ತಿ ಈ ಯುವ ಕಾಂಗ್ರೇಸ್ ಗೆ ಇದೆ ಎಂದು ಬಿಜೆಪಿ ಯುವ ಮೋರ್ಚಾಕ್ಕೆ ಕರ್ನಾಟಕ ರಾಜ್ಯ ಯುವ ಕಾಂಗ್ರೇಸ್ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಸವಾಲು ಹಾಕಿದರು.