ಉಡುಪಿ : ಕೊರಗಜ್ಜ ದೈವಸ್ಥಾನ ಕುಕ್ಕೆಹಳ್ಳಿ ಹಾಗೂ ವಿಶ್ವ ಬಂಟ್ಸ್ ಯೂತ್ ವಿಂಗ್ ವತಿಯಿಂದ ದೈವ ಚಾಕ್ರಿ ಮತ್ತು ಬಡ ಕುಟುಂಬಗಳಿಗೆ ಮೂರನೇ ಹಂತದ ಆಹಾರ ಕಿಟ್ ವಿತರಣಾ ಕಾರ್ಯಕ್ರವನ್ನು
ಹೆಬ್ರಿ ನರಸಿಂಹ ಪರವ ಇವರಿಗೆ ಆಹಾರ ಕಿಟ್ ಹಸ್ತಾಂತರ ಮಾಡುವ ಮೂಲಕ ಉದ್ಘಾಟಿಸಲಾಯಿತು. ನಲಿಕೆ ಸಮುದಾಯದ ಹಿರಿಯರಾದ ಬೀರು ಪಾಣಾರ ಹಾಗೂ ಕಾರ್ಕಳದ ಕೊರಗಜ್ಜ ಹಾಡಿನ ಮೂಲಕ ಅಪಾರ ಜನರ ಮನಸ್ಸನ್ನು ಗೆದ್ದ ಮಾಸ್ಟರ್ ಕಾರ್ತಿಕ್ ಅವರ ಮನೆಗೆ ಭೇಟಿ ನೀಡಿ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಬಂಟ್ಸ್ ಯೂತ್ ವಿಂಗ್ ಅಧ್ಯಕ್ಷ ವಿನೋದ್ ಶೆಟ್ಟಿ, ಕೊರಗಜ್ಜ ದೈವಸ್ಥಾನದ ಧರ್ಮದರ್ಶಿ ಕೃಷ್ಣ ಕುಲಾಲ್, ಯುವ ಬಬ್ಬುಸ್ವಾಮಿ ದರ್ಶನ ಪಾತ್ರಿ ನವೀನ್ ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.