Connect with us

Hi, what are you looking for?

Diksoochi News

ರಾಜ್ಯ

ಮಳೆಯಿಂದಾಗುವ ಅನಾಹುತ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮ; ಕಟ್ಟೆಚ್ಚರ ವಹಿಸಲು ಡಿಸಿ ಗಳಿಗೆ ಸಲಹೆ : ಸಿಎಂ ಯಡಿಯೂರಪ್ಪ

0

ಬೆಂಗಳೂರು : ಮಳೆಯಿಂದಾಗುವ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು, ಚರ್ಚಿಸಿ, ಸಲಹೆಗಳನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ದೇವೆ. ಅನಾಹುತಗಳನ್ನು ತಪ್ಪಿಸಬೇಕು. ಮುಳುಗಡೆಗೊಳ್ಳಲಿರುವ ಹಳ್ಳಿಗಳನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಪ್ರತಿ ಜಿಲ್ಲಾಡಳಿತ ಎಚ್ಚರಿಕೆಯಿಂದ, ಶಕ್ತಿ ಮೀರಿ ಪ್ರವಾಹದಿಂದ ಆಗುವ ಆನಾಹುತಗಳನ್ನು ತಡೆ ಹಿಡಿಯಲು ಸಿದ್ಧತೆಗಳನ್ನು ಮಾಡಿದ್ದಾರೆ. ಎನ್ ಡಿ ಆರ್ ಆಫ್, ಅಗತ್ಯವಿದ್ದೆಡೆ ಹೆಲಿಕಾಪ್ಟರ್ ವ್ಯವಸ್ಥೆಯನ್ನು, ಎಲ್ಲಾ ರೀತಿಯ ಸಿದ್ಧತೆಯನ್ನು ಕೇಂದ್ರ ಸರಕಾರ ಮಾಡಿದೆ. ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು ” ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. 20 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

“ಯಾವುದೇ ಅನಾಹುತಗಳುವಾಗದಂತೆ, ಕಟ್ಟೆಚ್ಚರ ವಹಿಸುವ ಸಲುವಾಗಿ ಇವತ್ತು ಎಲ್ಲರ ಜೊತೆ ಸಮಾಲೋಚನೆಯನ್ನು ಸಚಿವ ಸಂಪುಟ ಸಚಿವರುಗಳು ನಡೆಸಿದ್ದೇವೆ” ಎಂದರು.
“ಮುಳುಗಡೆಯಾಗಬಲ್ಲ ಹಳ್ಳಿಗಳನ್ನು ಜಿಲ್ಲಾಧಿಕಾರಿಗಳು ಗುರುತಿಸಿದ್ದಾರೆ. ಅಗತ್ಯವಿರುವ ಕಡೆ ಸ್ಥಳಾಂತರ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತಾರೆ” ಎಂದು ಅವರು ತಿಳಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!