Connect with us

Hi, what are you looking for?

Diksoochi News

ಕರಾವಳಿ

ಕಾಪು : ಜನರನ್ನು ದೋಚುತ್ತಿರುವ, ಅಚ್ಚೇದಿನ್ ಸರಕಾರ : ಅನ್ವರ್ ಅಲಿ ಕಾಪು

0

ಕಾಪು : ಕೋವಿಡ್‌ ಸಂಕಷ್ಟದಲ್ಲೂ ಡೀಸೆಲ್,ಪೆಟ್ರೋಲ್,ಗ್ಯಾಸ್,ವಿದ್ಯುತ್ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಸರಕಾರ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ ಮಾಜಿ ರಾಜ್ಯ ಕಾರ್ಯದರ್ಶಿ ಅನ್ವರ್ ಅಲಿ ಯವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ರಾಜ್ಯಧ್ಯಾಂತ ಪಕ್ಷವು ಹಮ್ಮಿಕೊಂಡ ಕಾರ್ಯಕ್ರಮದ ಪ್ರಯುಕ್ತ ಕಾಪುವಿನ ಹೃದಯ ಭಾಗದಲ್ಲಿ ಪಕ್ಷದ ಕಾರ್ಯಕರ್ತರು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತಾಡಿದರು.
2014 ರಲ್ಲಿ ಅಚ್ಚೇ ದಿನ್ ಗಳ ಕನಸನ್ನು ಬಿತ್ತಿ ಅಧಿಕಾರಕ್ಕೆ ಬಂದ ಸರಕಾರ ಈ ರೀತಿಯಾಗಿ ಜನರನ್ನು ದೋಚುವುದು ಸರಿಯಲ್ಲ ಕೂಡಲೇ ಬೆಲೆ ಇಳಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕೆಂದು ಅವರು ಆಗ್ರಹಿಸಿದರು.

ಈ ಸಂದರ್ಭ ಉಡುಪಿ ಜಿಲ್ಲಾ ಅಧ್ಯಕ್ಷರು ಅಬ್ದುಲ್ ಅಜೀಜ್ ಉದ್ಯಾವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರುಖ್ ತೀರ್ಥಹಳ್ಳಿ, ರಾಜ್ಯ ಮಾಜಿ ಕಾರ್ಯದರ್ಶಿ ರಿಯಾಜ್ ಕುಕ್ಕಿಕಟ್ಟೆ , ಅಬ್ದುರ್ರಹಮಾನ್ ಉದ್ಯಾವರ , ಮುಹಮ್ಮದ್ ಇಕ್ಬಾಲ್ ಮಜೂರ್, ಮುಹಮ್ಮದ್ ಅಲಿ ಕಾಪು , ಫಾರಿಸ್, ಆರೀಫ್, ಸಾಹಿಲ್, ಅಬ್ದುಲ್ ಸತ್ತಾರ್ ಅಬ್ದುಲ್ ಅಹದ್, ಮುಹಮ್ಮದ್ ಅವೇಜ್ ಉಪಸ್ಥಿತರಿದ್ದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!