Connect with us

Hi, what are you looking for?

Diksoochi News

ರಾಷ್ಟ್ರೀಯ

ಕೊರೋನಾ ಸಂಕಷ್ಟ : ಆರ್ಥಿಕ ಪ್ಯಾಕೇಜ್ ಘೋಷಿಸಿದ ಸಚಿವೆ ನಿರ್ಮಲಾ ಸೀತಾರಾಮನ್

0

ನವದೆಹಲಿ :  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ  ಕೋವಿಡ್ ಬಿಕ್ಕಟ್ಟಿನಿಂದ ಪರಿಣಾಮ ಉಂಟಾದ ವಿವಿಧ ವಲಯಗಳಿಗೆ 8 ಅಂಶಗಳ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಒಟ್ಟು‌ 1.1 ಲಕ್ಷ ಕೋಟಿ ರೂ.ಗಳ ಸಾಲ ಖಾತರಿ ಯೋಜನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಹಂಚಿಕೆಯಾಗಿರುವ 50,000 ಕೋಟಿ ರೂ. ಮತ್ತು ಇತರ ಕ್ಷೇತ್ರಗಳಿಗೆ 60,000 ಕೋಟಿ ರೂ.ಘೋಷಣೆ ಮಾಡಿದ್ದಾರೆ.

ಎಮೆರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್ಜಿಎಸ್) ಅಡಿಯಲ್ಲಿ ಸೀತಾರಾಮನ್ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂಪಾಯಿ ಅಗತ್ಯಗಳಿಗೆ ಅನುಗುಣವಾಗಿ ವಲಯವಾರು ವಿವರಗಳನ್ನು ನೀಡಲಾಗುವುದು ಎಂದಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ 25 ಲಕ್ಷ ಜನರಿಗೆ ಸಾಲ ಖಾತರಿ ಯೋಜನೆ ಘೋಷಿಸಿದ್ದಾರೆ.


ಪ್ರವಾಸೋದ್ಯಮ ಪುನರುತ್ಥಾನಕ್ಕೆ ಯೋಜನೆ

Advertisement. Scroll to continue reading.


ಪ್ರವಾಸೋದ್ಯಮದ ಪುನರುತ್ಥಾನಕ್ಕೆ 11,000ಕ್ಕೂ ಹೆಚ್ಚಿನ ನೋಂದಾಯಿತ ಪ್ರವಾಸಿ ಗೈಡ್ ಗಳು/ಟ್ರಾವೆಲ್ ಮತ್ತು ಇತರ ಪ್ರವಾಸೋದ್ಯಮ ವಲಯದಲ್ಲಿ ತೊಡಗಿಕೊಂಡವರಿಗೆ ಒದಗಿಸಲಾಗುತ್ತದೆ. ಇನ್ನು, 5 ಲಕ್ಷ ಉಚಿತ ವೀಸಾ ನೀಡುವ ಯೋಜನೆ ಇದಾಗಿದೆ ಎಂದು ಹೇಳಿದ್ದಾರೆ. ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ 10 ಲಕ್ಷದವರೆಗೆ ಸಾಲ, ಲೈಸೆನ್ಸ್ ಹೊಂದಿರುವ ಟೂರಿಸ್ಟ್ ಗೈಡ್ ಗಳಿಗೆ 1 ಲಕ್ಷದ ವರೆಗೆ ಸಾಲ ಒದಗಿಸಲಾಗುವುದು.
ಇನ್ನು,  ಆತ್ಮನಿರ್ಭರ್ ಭಾರತ್ ರೋಜ್ ಗಾರ್ ಯೋಜನೆಯನ್ನು 2021 ರ ಜೂನ್ 30 ರಿಂದ ಮಾರ್ಚ್ 22, 2022 ರವರೆಗೆ ವಿಸ್ತರಿಸಲಾಗಿದೆ.
ರೈತರಿಗೆ ಹೆಚ್ಚುವರಿ ಪ್ರೋಟೀನ್ ಆಧಾರಿತ ರಸಗೊಬ್ಬರ ಸಹಾಯಧನ 15,000 ಕೋಟಿ ನೀಡಲಾಗುವುದು.
ಈ ಹಿಂದೆ ಘೋಷಿಸಿದಂತೆ ಪ್ರಧಾನಮಂತ್ರಿ ಆತ್ಮನಿರ್ಭರ ಗರೀಭ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆಯನ್ನು ಮೇ ತಿಂಗಳಿಂದ ನವೆಂಬರ್ 2021 ರವರೆಗೆ ವಿಸ್ತರಿಸಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!