Connect with us

Hi, what are you looking for?

Diksoochi News

ಸಿನಿಮಾ

ಪುನೀತ್ – ಪವನ್ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರೋ ಚಿತ್ರದ ಟೈಟಲ್ ಅನಾವರಣಕ್ಕೆ ದಿನಾಂಕ ನಿಗದಿ

0

ಚಂದನವನ : ನಿರ್ದೇಶಕ ಪವನ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿ ಬರಲಿದೆ ಅನ್ನೋದು ಹಳೇ ವಿಚಾರ . ಆ ಬಳಿಕ ಚಿತ್ರದ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಸ್ಯಾಂಡಲ್ ವುಡ್ ನ ಪ್ರತಿಷ್ಟಿತ ಹೊಂಬಾಳೆ ಫಿಲಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಇದೀಗ ಈ ಚಿತ್ರದ ಬಗ್ಗೆ ಅಪ್ಡೇಟ್ ಹೊರ ಬಿದ್ದಿದೆ. ಹೊಸ ಚಿತ್ರದ ಶೀರ್ಷಿಕೆಯನ್ನು ಜುಲೈ 1 ರ ಬೆಳಗ್ಗೆ 11.46ಕ್ಕೆ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಈ ಬಗ್ಗೆ ಪವನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಪವನ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಇವರಿಬ್ಬರ ಕಾಂಬಿನೇಷನ್ ನಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ವಿಭಿನ್ನ ಚಿತ್ರಗಳನ್ನು ನೀಡಿರೋ ಪವನ್, ಪುನೀತ್ ರಾಜ್ ಕುಮಾರ್ ಅವರನ್ನು ಯಾವ ಪಾತ್ರದ ಮೂಲಕ ಕನ್ನಡಿಗರ ಮುಂದೆ ಪ್ರಚುರ ಪಡಿಸಲಿದ್ದಾರೆ ಅನ್ನೋದು ಬಹುದೊಡ್ಡ ಕುತೂಹಲವಾಗಿದೆ.

ಪವನ್ ಕುಮಾರ್ ಈಗಾಗಲೇ ‘ಲೂಸಿಯ’, ‘ಯು ಟರ್ನ್’ ಅಂಥ ವಿಭಿನ್ನ ಸಿನಿಮಾಗಳನ್ನು ನೀಡಿರುವ ಚಂದನವನದ ಪ್ರತಿಭಾವಂತ ನಿರ್ದೇಶಕ. ಜೊತೆಗೆ ನಟನೆಯಲ್ಲೀ ತೊಡಗಿಕೊಂಡಿದ್ದು, ಗಾಳಿಪಟ 2 ನಲ್ಲಿ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಯೋಜನೆಯಲ್ಲಿ ಪುನೀತ್ ಅವರಿಗೆ ಇದು ಎರಡನೇ ಸಿನಿಮಾ ಇದಾಗಿದ್ದು, ಮೊದಲು ಸಿನಿಮಾ ಯುವರತ್ನ ದಲ್ಲಿ ಇವರು ಒಟ್ಟಿಗೆ ಕೆಲಸ ಮಾಡಿದ್ದರು. ಸದ್ಯ ಜೇಮ್ಸ್ ಸಿನಿಮಾದಲ್ಲಿ ಪವರ್ ಸ್ಟಾರ್ ಬ್ಯುಸಿಯಾಗಿದ್ದು, ಸಿನಿಮಾದ ಬಹುತೇಕ ಚಿತ್ರಕರಣ ಮುಕ್ತಾಯವಾಗಿದೆ. ಈ ಚಿತ್ರ ಮುಗಿಯುತ್ತಿದ್ದಂತೆ ಪವನ್ ಕುಮಾರ್ ಜೊತೆ ಹೊಸ ಚಿತ್ರ ಪ್ರಾರಂಭ ಮಾಡಲಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಮಂಗಳೂರು : ನಾಲ್ಕೂವರೆ ತಿಂಗಳ ಹಸುಗೂಸನ್ನು ಸಾಯಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಗುಜ್ಜರಕೆರೆಯಲ್ಲಿ ನಡೆದಿದೆ. ನಾಲ್ಕೂವರೆ ತಿಂಗಳ ಮಗು ಅಬ್ದುಲ್ಲಾ ಹೂದ್ ಮತ್ತು ತಾಯಿ ಫಾತಿಮಾ ರುಕಿಯಾ(23) ಮೃತಪಟ್ಟವರು....

ರಾಷ್ಟ್ರೀಯ

1 ಲಕ್ನೋ: ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಅವರ ಮಗ ತಾವು ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿದ ಪರಿಣಾಮ ಸಾವಿಗೀಡಾದ ಘಟನೆ ನಡೆದಿದೆ. ಉತ್ತರಪ್ರದೇಶದ ಖಾನ್‌ಪುರ್‌ ದೆಹತ್ ಜಿಲ್ಲೆಯ ಅಕ್ಬರ್‌ಪುರ ನಗರದಲ್ಲಿ ಈ...

ಜ್ಯೋತಿಷ್ಯ

1 ದಿನಾಂಕ : ೦೪-೧೨-೨೩, ವಾರ: ಭಾನುವಾರ, ನಕ್ಷತ್ರ : ಆಶ್ಲೇಷಾ, ತಿಥಿ : ಷಷ್ಠಿ ವಿವಾಹೇತರ ಸಂಬಂಧಗಳಿಂದ ಅಂತರ ಕಾಯ್ದುಕೊಳ್ಳಬೇಕು. ನೀವು ಸಂಬಂಧಿಕರನ್ನು ಹೆಚ್ಚು ನಂಬಬಾರದು. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ...

ರಾಷ್ಟ್ರೀಯ

2 ಚೆನ್ನೈ : ಚೆನ್ನೈನಿಂದ ಕೊಯಮತ್ತೂರು ಕಡೆಗೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿ 20 ಮಂದಿ ಗಾಯಗೊಂಡಿದ್ದು, ಒಬ್ಬ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಕನ್ಯಾಕುಮಾರಿ ನಿವಾಸಿ ಮಣಿಕಂದನ್ ಎಂದು ಗುರುತಿಸಲಾಗಿದೆ. 45...

ರಾಷ್ಟ್ರೀಯ

0 ಛತ್ತೀಸ್‌ಗಢ : ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಇದು ಅಚ್ಚರಿಯ ಗೆಲುವಾಗಿದ್ದರೆ, ಮತ್ತೊಂದೆಡೆ ಸೇಡಿನ ಗೆಲುವೊಂದು ಈ ಕ್ಷೇತ್ರದಲ್ಲಿ ಹುಬ್ಬೇರಿಸುವಂತೆ ಮಾಡಿದೆ. ತನ್ನ ಮಗನ ಸಾವಿನ ವಿರುದ್ಧ ಸೇಡು...

error: Content is protected !!