ಮುದರಂಗಡಿ: ನೂತನವಾಗಿ ನಿರ್ಮಾಣವಾಗಲಿರುವ ಮುದರಂಗಡಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಶಾಸಕರ ನಿಧಿಯಿಂದ 10ಲಕ್ಷ ರೂಪಾಯಿ ಅನುದಾನ ಒದಗಿಸುವುದಾಗಿ ಶಾಸಕ ಲಾಲಾಜಿ ಆರ್ ಮೆಂಡನ್ ಭರವಸೆ ನೀಡಿದರು.
ಸುಮಾರು 65ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗ್ರಾಪಂ ಕಟ್ಟಡಕ್ಕೆ ಮುದರಂಗಡಿಯಲ್ಲಿ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು,ಕೆ ಆರ್ ಐ ಡಿ ಎಲ್ ನಿರ್ವಹಣೆಯಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಕಾಯ್ದಿರಿಸಿದ 29 ಲಕ್ಷ ಅನುದಾನದಲ್ಲಿ ಮೊದಲ ಹಂತದಲ್ಲಿ ನೆಲ ಅಂತಸ್ತಿನ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಎರಡನೇ ಹಂತದಲ್ಲಿ ವಿವಿಧ ಅನುದಾನಗಳನ್ನು ಕ್ರೋಡಿಕರಿಸಿ ಮೇಲು ಅಂತಸ್ತಿನ ಕಾಮಗಾರಿ ನಡೆಯಲಿದೆ ಎಂದರು.
ಅರ್ಚಕ ಮಾಧವ ಭಟ್ ಶಿಲಾನ್ಯಾಸ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಮುದರಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯೋಗಿನಿ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಿಲ್ಪಾ ಜಿ ಸುವರ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮೈಕಲ್ ರಮೇಶ್ ಡಿಸೋಜ, ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ಗಾಂವ್ ಕರ್, ಗ್ರಾಪಂ ಸದಸ್ಯರಾದ ರವೀಂದ್ರ ಪ್ರಭು, ಶಿವರಾಮ ಭಂಡಾರಿ, ಬಾಲಚಂದ್ರ ಶೆಟ್ಟಿ, ಮೋಹಿನಿ ಹೆಗ್ಡೆ, ಸವಿತಾ ಪೂಜಾರಿ, ಇಂದಿರಾ ಆಚಾರ್ಯ,
ಪಿಡಿಒ ಸುರೇಶ್, ಗ್ರಾಮ ಕರಣಿಕ ಜಗದೀಶ್, ಕೆಆರ್ ಐ ಡಿ ಎಲ್ ಇಂಜಿನಿಯರ್ ಗಳಾದ ದಿನೇಶ್, ದಿವ್ಯರಾಜ್, ಗುತ್ತಿಗೆದಾರ ರಾಘವೇಂದ್ರ ಶೆಟ್ಟಿ, ಉದ್ಯಮಿ ಗಂಗಾಧರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.