ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಅಂತರ್ ಜಿಲ್ಲಾ ಮೋಟಾರು ಸೈಕಲ್ ಕಳ್ಳರನ್ನು ಬಂಧಿಸಲಾಗಿದೆ. ಗದಗ ಮೂಲದ ಫಕ್ರುದ್ದೀನ್(22), ಧಾರವಾಡ ಮೂಲದ ಕಿರಣ ಶರಣಪ್ಪ ಕುಂಬಾರ(19) ಬಂಧಿತರು. ಉಡುಪಿ ಎಸ್ಪಿ ವಿಷ್ಣುವರ್ಧನ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮತ್ತು ಕುಂದಾಪುರ ಉಪವಿಭಾಗ ಪೊಲೀಸ್ ಅಧೀಕ್ಷಕ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸರು ಆರೋಪಗಳನ್ನು ಬಂಧಿಸಿದ್ದಾರೆ. ರಾಜ್ಯದ ವಿವಿದೆಡೆ ಕಳವುಗೈದ ಸುಮಾರು 2,75,000 ರೂ.ಮೌಲ್ಯದ 5 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಂದೂರು ವೃತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪಿ.ಎಸ್.ಐ ನಂಜಾ ನಾಯ್ಕ, ಪಿ.ಎಸ್.ಐ ಅನಿಲ್ ಮಾದರ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ಮೋಹನ ಪೂಜಾರಿ ಶಿರೂರು, ಚಂದ್ರಶೇಖರ ಅರೆಶಿರೂರು, ಶ್ರೀಧರ ಸೆಳ್ಳೆಕುಳ್ಳಿ, ಕೃಷ್ಣ ದೇವಾಡಿಗ, ಸುಜಿತ್ ಗೌಡ, ರಾಮು ಹೆಗ್ಡೆ, ರಾಘವೇಂದ್ರ ದೇವಾಡಿಗ, ಶಿವರಾಮ ನಾಯ್ಕ್, ಚಾಲಕರಾದ ರಾಜೇಶ್ ಡಿಸೋಜಾ, ದಿನೇಶ ಪಡುವರಿ ಪಾಲ್ಗೊಂಡಿದ್ದರು.