ಬ್ರಹ್ಮಾವರ : ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವ ಮತ್ತು ಸಂದೇಶ ವಿಶ್ವಕ್ಕೆ ನೀಡಿದ ಸಂದೇಶವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸೋಮವಾರ ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರುಗಿದ ಬ್ರಹ್ಮ ಶ್ರೀ ನಾರಾಯಣ ಗುರುಗಳ 167 ನೇ ಜನ್ಮ ದಿನಾಚರಣೆ ಮತ್ತು ಸಾಧಕರೀಗೆ ಸನ್ಮಾನ , ಅಭಿನಂದನೆ , ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾರಾಯಣ ಗುರುಗಳ ವಿಚಾರ ಧಾರೆಗಳನ್ನು ತಿಳಿದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಕೂಡಾ ಮೆಚ್ಚಿಕೊಂಡಿದ್ದಾರೆ ಎಂದರು.
ಅತಿಥಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಗ್ರಾಮ ಮಟ್ಟದಲ್ಲಿ ಸಮಾಜ ಸೇವೆ ಮಾಡಲು ಗ್ರಾಮ ಪಂಚಾಯತಿ ಸದಸ್ಯರಿಗೆ ಮಾತ್ರ ಸಾದ್ಯ ಕೇಂದ್ರದ ಮಂತ್ರಿಯಾದವರೀಗೆ ಅವರ ಗ್ರಾಮ ಪಂಚಾಯತಿಯ ಅಗತ್ಯ ಇರುತ್ತದೆ ಪಕ್ಷ ಬೇದ ಮರೆತು ಜನಸೇವೆ ಮಾಡಿ ಎಂದರು.
ಬ್ರಹ್ಮಾವರ ತಾಲೂಕಿನ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ ಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರಾಗಿ ಚುನಾಯಿತರಾದ ಬಿಲ್ಲವ ಸಮಾಜದ 110 ಮಂದಿಯನ್ನು , ಶೈಕ್ಷಣಿಕ ಸಾಧನೆ ಮತ್ತು ಪೋಲೀಸ್ ಇಲಾಖೆಯಲ್ಲಿ, ವೈದ್ಯಕೀಯ ಸೇವೆಯಲ್ಲಿರುವ ಗಣ್ಯರನ್ನು ಸನ್ಮಾನಿಸಲಾಯಿತು.
ಬ್ರಹ್ಮಾವರ ಬಿಲ್ಲವ ಸಮಾಜ ಸಂಘದ ಅಧ್ಯಕ್ಷ ಬಿ. ಎನ್ . ಶಂಕರ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು.
ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಸತ್ಯಜಿತ್ ಸುರತ್ಕಲ್, ಜಗನ್ನಾಥ ಕೋಟೆ, ಅಚ್ಯುತ ಅಮೀನ, ಸಂಘದ ಉಪಾಧ್ಯಕ್ಷ ರಾಘವ ಪೂಜಾರಿ, ಅಶೋಕ ಪೂಜಾರಿ ಹಾರಾಡಿ, ನರಸಿಂಹ ಪೂಜಾರಿ, ಕಾರ್ಯದರ್ಶಿ ಶೇಖರ ಪೂಜಾರಿ, ಖಜಾಂಚಿ ಮೋಹನ್ ಪೂಜಾರಿ, ಆಕ್ರಮ ಸಕ್ರಮ ಸಮಿತಿಯ ರಾಜು ಪೂಜಾರಿ ಉಪ್ಪೂರು, ಮಹಿಳಾ ಸಂಘದ ಜ್ಯೋತಿ ಪೂಜಾರಿ, ವಾರಂಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗುಲಾಬಿ ಪೂಜಾರಿ, ಉದ್ಯಮಿ ಬಿರ್ತಿ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.
ಬಾಲಕೃಷ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.