ಕೊಚ್ಚಿ: ಕಳೆದ ಕೆಲ ದಿನಗಳ ಹಿಂದೆ ಮಲಯಾಳಂ ನಿರ್ದೇಶಕ ಅಕ್ಬರ್ ಆಲಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳೋದಾಗಿ ಘೋಷಣೆ ಮಾಡಿದ್ದರು.
ಇದೀಗ ಆಲಿ ಅಕ್ಬರ್ ಹಾಗೂ ಅವರ ಪತ್ನಿ, ಮುಸ್ಲಿಂ ಧರ್ಮವನ್ನು ತೊರೆದು, ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾಬತ್ ಜೊತೆಗೆ 12 ಮಂದಿ ತಮಿಳುನಾಡಿನ ಕೂನೂರು ಸಮೀಪ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿತ್ತು. ಘಟನೆಯನ್ನು ನೋಡಿ ಕೆಲವರು ಸಂಭ್ರಮಿಸಿದ್ದರು. ಸಾವಿನಲ್ಲಿಯೂ ಸಂಭ್ರಮ ಮಾಡಿರುವವರಲ್ಲಿ ಹೆಚ್ಚು ಜನರು ಮುಸ್ಲಿಂ ಆಗಿರೋದರಿಂದ ಬೇಸತ್ತ ಅಕ್ಬರ್ ಅಲಿ ಇಸ್ಲಾಂ ತೊರೆಯುವ ನಿರ್ಧಾರ ಮಾಡಿದ್ದರು.
ಅದರಂತೆ ಈಗ ಮುಸ್ಲಿಂ ಧರ್ಮ ತೊರೆದು, ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಈ ಬಗ್ಗೆ ಹಿಂದೂ ಸೇವಾ ಕೇಂದ್ರ ಸ್ಥಾಪಕ ಪ್ರತೀಶ್ ವಿಶ್ವನಾಥ್ ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಿರ್ದೇಶಕ ಅಕ್ಬರ್ ಆಲಿ ಹಾಗೂ ಅವರ ಪತ್ನಿ ಹಿಂದೂ ಧರ್ಮಕ್ಕೆ ಮಂತಾಂತರ ಗೊಂಡಿದ್ದಾರೆ. ಅಕ್ಬರ್ ಈಗ ರಾಮಸಿಂಹನ್ ಎಂಬುದಾಗಿ ಹೆಸರು ಬದಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.