ಉಚ್ಚಿಲ: ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮನೆ ಮನೆ ಸುತ್ತಾಡುವ ಆಶಾ ಕಾರ್ಯಕರ್ತೆಯರು
ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ ಎಂದು ಕಾಪು ತಾಲೂಕು ಮಾಜಿ ಉಪಾಧ್ಯಕ್ಷ ಯು.ಸಿ ಶೇಖಬ್ಬ ಸರಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಚ್ಚಿಲದಲ್ಲಿ ಇಂದು ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಶಿಕ್ಷಕಿಯರಿಗೆ ದಾನಿಗಳ ಸಹಕಾರದಿಂದ ಕೊಡ ಮಾಡಿದ ಪಡಿತರ ಕಿಟ್ ವಿತರಿಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ತನ್ನ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ನಾವು ನಮ್ಮ ಕಿಂಚಿತ್ತು ಸಹಕಾರವನ್ನು ನೀಡಿದ್ದೇವೆ.ಸರಕಾರ ಕೂಡ ಈ ಬಗ್ಗೆ ಗಮನ ಹರಿಸಬೇಕು.ಗಾಳಿ-ಮಳೆ ಎನ್ನದೆ ದೂರ ಊರಿನ ಮನೆ ಮನೆಗಳಿಗೆ ನಡೆದುಕೊಂಡೇ ದಾರಿ ಸಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರಕಾರ ಸಾರಿಗೆ ಸವಲತ್ತನ್ನು ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಮೋಹಿನಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಬ್ಯಾಂಕ್ ಆಫ್ ಬರೋಡ ಉಚ್ಚಿಲ ಬ್ರಾಂಚ್ ವ್ಯವಸ್ಥಾಪಕರಾದ ಪ್ರಸನ್ನ ಚೋರೆ,ಉಚ್ಚಿಲ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಗಣೇಶ್,ಮಾಜಿ ಉಪಾಧ್ಯಕ್ಷೆ ಇಂದಿರಾ ಶೆಟ್ಟಿ,ಗ್ರಾ.ಪಂ ಸದಸ್ಯರಾದ ರಫೀಕ್ ಎಸ್ಕೆ,ರಝಾಕ್ ಬಗ್ಗತೋಟ ಹಾಗು ಸತೀಶ್ ಉಪಸ್ಥಿತರಿದ್ದರು.