ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕಂದಾವರ ಪಂಚಾಯತ್ ಸದಸ್ಯ ಅಭಿಜಿತ್ ಕೊಠಾರಿ ಮೂಡ್ಲಕಟ್ಟೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪಂಚಾಯತ್ ಸದಸ್ಯನಾಗಿ ನೂರಾರು ಮಂದಿಯ ಕಷ್ಟಕ್ಕೆ ನೆರವಾಗಿ, ಒಬ್ಬ ಉತ್ತಮ ಪಂಚಾಯತ್ ಸದಸ್ಯನನ್ನು ಆಯ್ಕೆ ಮಾಡಿದ್ದೇವೆ ಎಂದು ಗ್ರಾಮಸ್ಥರು ಸಂತಸ ಪಡುವಂತಹ ಕಾರ್ಯ ಮಾಡುತ್ತಿದ್ದಾರೆ ಅಭಿಜಿತ್.
“ಟೀಂ ಮೂಡ್ಲಕಟ್ಟೆ” ಎಂಬ ತಂಡ ಕಟ್ಟಿ, ಅಜಿತ್ ಪೂಜಾರಿ ಮೂಡ್ಲಕಟ್ಟೆ,ಸುನಿಲ್ ಪೂಜಾರಿ ಮೂಡ್ಲಕಟ್ಟೆ,ಗಣೇಶ್.ಕೆ. ವಿ,ರಾಘವೇಂದ್ರ ಶೇರಿಗಾರ್ ಹಾಗೂ ಇನ್ನಿತರ ಗೆಳೆಯರು ಹಾಗೂ ಸಹೋದರ ಅಕ್ಷಯ್ ಕೊಠಾರಿ,ಮೂಡ್ಲಕಟ್ಟೆ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ.
ಪ್ರಸ್ತುತ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಮೂಡ್ಲಕಟ್ಟೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಕೊಠಾರಿ ಯುವ ಸಂಘಟನೆ ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ನೇತೃತ್ವದ ‘ಟೀಂ ಮೂಡ್ಲಕಟ್ಟೆ” ಮೂಲಕ
ಕಳೆದ ಲಾಕ್ ಡೌನ್ ಅವಧಿಯಲ್ಲಿ 325ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ್ದು, ಈ ಬಾರಿಯೂ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ.
“ಟೀಂ ಮೂಡ್ಲಕಟ್ಟೆ” ಕಾರ್ಯಗಳು
ಶವ ಸಂಸ್ಕಾರ ಮಾಡುವ ಬಜರಂಗದಳ ಕುಂದಾಪುರ ತಂಡಕ್ಕೆ 25ದಿನಕ್ಕಾಗುವಷ್ಟು ದಿನಸಿ ಸಾಮಗ್ರಿಗಳ ಪೂರೈಕೆ ಮಾಡಲಾಗಿದೆ.
ಬಸ್ರೂರು ಪ್ರಾಥಮಿಕ ಆರೋಗ್ಯಕೇಂದ್ರ ವ್ಯಾಪ್ತಿಯ 15 ಆಶಾ ಕಾರ್ಯಕರ್ತೆರಿಗೆ ದಿನಸಿ ಹಾಗೂ ಮೆಡಿಕಲ್ ಕಿಟ್ ಗಳ ವಿತರಿಸಿದೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ,ಕಂಡ್ಲೂರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಿಸಲಾಗಿದೆ. ಬಸ್ರೂರು ಆರೋಗ್ಯಕೇಂದ್ರಕ್ಕೆ ಮೆಡಿಕಲ್ ಕಿಟ್ ಕ್ಯಾನ್ಸರ ಪೀಡಿತ ರೋಗಿಯೊಬ್ಬರ ಮನೆಗೆ ತಿಂಗಳಿಗಾಗುನಷ್ಟು ದಿನಸಿ ಪೂರೈಕೆ ಹಾಗೂ ಮೆಡಿಸಿನ್ ಗಾಗಿ 5000 ನೀಡಲಾಗಿದೆ.
ತನ್ನ ವಾರ್ಡ್ ಆದ ಮೂಡ್ಲಕಟ್ಟೆ ಸಟ್ವಾಡಿ ಗೆ ಅಭಿಜಿತ್ ಕೊಠಾರಿ ವೈಯುಕ್ತಿಕ ಹಣದಲ್ಲಿ ಎಲ್ಲಾ 150 ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದ್ದಾರೆ. ದಾನಿಗಳ ನೆರವಿನಿಂದ ಕಂದಾವರ ಪಂಚಾಯತ್ ವ್ಯಾಪ್ತಿಯ 45 ವಿಕಲಚೇತನರಿಗೆ ಸಹಿತ ,ತಮ್ಮ ಸುತ್ತ ಮುತ್ತಲಿನ ಒಟ್ಟು 300+ಕ್ಕೂ ಹೆಚ್ಚು ಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡಲಾಗಿದೆ. ಬಸ್ರೂರು ಕೋವಿಡ್ ಲಸಿಕಾ ಕೇಂದ್ರಕ್ಕೆ ತೆರಳಲು ಅಶಕ್ತರಿಗೆ,ವಿಕಲಚೇತನರಿಗೆ ಹಾಗೂ ವೃದ್ಧರಿಗೆ ಉಚಿತ ಆಟೋ ಸೇವೆ ಪ್ರಾರಂಭಿಸಲಾಗಿದ್ದು, ಲಸಿಕಾ ಕೇಂದ್ರದಲ್ಲಿ ಅಭಿಜಿತ್ ಕೊಠಾರಿ ಸೇರಿದಂತೆ ತಂಡದ ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಂದಾವರ ಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯ ಮೆಡಿಸಿನ್ ನ್ನು ಮನೆ ಮನೆಗೆ ತಲುಪಿಸುತ್ತಿದ್ದು,
ತನ್ನ ವಾರ್ಡ್ ನಲ್ಲಿ ಕೋವಿಡ್ ಪಾಸಿಟಿವ್ ಬಂದವರ ಮನೆ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬುವಕೆಲಸ ಮಾಡುತ್ತಿದ್ದಾರೆ.